ಕಹಿ ಗುಳಿಗೆಯನ್ನು ನುಂಗುವುದು ಅನಿವಾರ್ಯ: ರಿಷಬ್ ಶೆಟ್ಟಿ ಅಸಮಾಧಾನ

ಬುಧವಾರ, 2 ಮಾರ್ಚ್ 2022 (17:47 IST)
ಬೆಂಗಳೂರು: ತಮ್ಮ ನಿರ್ಮಾಣದ ಪೆದ್ರೊ ಸಿನಿಮಾ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗದೇ ಇರುವ ಬಗ್ಗೆ ನಿರ್ದೇಶಕ, ನಿರ್ಮಾಪಕ, ನಟ ರಿಷಬ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಿಷಬ್ ಶೆಟ್ಟಿ ಫಿಲಂಸ್ ನಿಂದ ನಿರ್ಮಾಣವಾದ ಪೆದ್ರೋ ಎಷ್ಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಪ್ರಶಸ್ತಿ ಗೆದ್ದುಕೊಂಡು ಬಂದಿದೆ. ಆದರೆ ಬೆಂಗಳೂರು ಚಲನಚಿತ್ರೋತ್ಸವದಲ್ಲೇ ಪ್ರದರ್ಶನಗೊಳ್ಳುವ ಅವಕಾಶ ಪಡೆದಿಲ್ಲ. ಕೆಲವೊಮ್ಮೆ ಕಹಿಗುಳಿಗೆಯನ್ನು ನುಂಗಬೇಕು ಆರೋಗ್ಯದ ದೃಷ್ಟಿಯಿಂದ ಎಂದು ರಿಷಬ್ ಸುದೀರ್ಘ ಪತ್ರದ ಮೂಲಕ ಬೇಸರ ಹೊರಹಾಕಿದ್ದಾರೆ.

ಗಿರೀಶ್ ಕಾಸರವಳ್ಳಿ, ಎಂ.ಎಸ್ ಸತ್ಯು, ಕವಿತಾ ಲಂಕೇಶ್ ಸೇರಿದಂತೆ ಗಣ‍್ಯರು ಈ ಸಿನಿಮಾವನ್ನು ಮೆಚ್ಚಿದ್ದರು. ಆದರೆ ಬೆಂಗಳೂರಿನ ಚಿತ್ರೋತ್ಸವಕ್ಕೆ ಯಾಕೋ ರುಚಿಸಿಲ್ಲ.ನಮ್ಮೂರಿನ ಸಿನಿಮಾವನ್ನು ನಮ್ಮವರಿಗೇ ವೀಕ್ಷಿಸಲು ಸಾಧ‍್ಯವಾಗಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದಕ್ಕೆ ಅಡ್ಡಗಾಲು ಹಾಕಿವೆ. ಸಿನಿಮಾವನ್ನು ಎಲ್ಲಿ ನೋಡಬಹುದು ಎಂದು ನಮ್ಮನ್ನು ಕೇಳುತ್ತಿರುವ ಪ್ರೀತಿಯ ಅಭಿಮಾನಿಗಳಿಗೆ ಒಂದು ಕೋರಿಕೆ, ನೀವು ಯಾವತ್ತೂ ಹೀಗೇ ನಮ್ಮೊಂದಿಗಿರಿ ಎಂದು ರಿಷಬ್ ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ