ಜಾಕ್ವೆಲಿನ್ ಕೈ ಹಿಡಿದು ಮುಂಬೈನಲ್ಲಿ ಟ್ರೈಲರ್ ಲಾಂಚ್ ಗೆ ಬಂದ ಕಿಚ್ಚ ಸುದೀಪ್

ಗುರುವಾರ, 23 ಜೂನ್ 2022 (16:21 IST)
Photo Courtesy: Twitter
ಮುಂಬೈ: ಕನ್ನಡ ಮೂಲದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಪ್ರಚಾರದಲ್ಲಿ ಕಿಚ್ಚ ಸುದೀಪ್ ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡಿ ಟ್ರೈಲರ್ ಲಾಂಚ್ ಮಾಡಿದ್ದ ಚಿತ್ರತಂಡ ಇಂದು ಮುಂಬೈನಲ್ಲಿ ಪ್ರಚಾರ ನಡೆಸುತ್ತಿದೆ.

ಮುಂಬೈನಲ್ಲಿ ಇಂದು ಟ್ರೈಲರ್ ಲಾಂಚ್ ಪ್ರೆಸ್ ಮೀಟ್ ನಡೆದಿದ್ದು, ಕಿಚ್ಚ ಸುದೀಪ್, ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಕೈ ಕೈ ಹಿಡಿದು ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕುತ್ತಾ ವೇದಿಕೆಯೇರಿದ್ದಾರೆ.

ಈ ಸಿನಿಮಾದಲ್ಲಿ ಜುಲೈ 28 ರಂದು ಬಿಡುಗಡೆಯಾಗಲಿದ್ದು, ಒಂದು ತಿಂಗಳ ಮೊದಲೇ ಚಿತ್ರತಂಡ ಪ್ರಚಾರ ಶುರು ಮಾಡಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇಂದು ಚಿತ್ರದ ಟ್ರೈಲರ್ ಡಿಜಿಟಲ್ ಆಗಿ ರಿಲೀಸ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ