ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಒಪ್ಪಿಕೊಳ್ಳಲು ಮೂಲ ಕಾರಣ ಇದೇ ವ್ಯಕ್ತಿ!

ಗುರುವಾರ, 23 ಜೂನ್ 2022 (09:30 IST)
ಬೆಂಗಳೂರು: ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್ ಪ್ರೆಸ್ ಮೀಟ್ ನಲ್ಲಿ ಕಿಚ್ಚ ಸುದೀಪ್ ಈ ಸಿನಿಮಾ ಒಪ್ಪಿಕೊಳ್ಳಲು ನಿಜ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾವನ್ನು ಒಪ್ಪಿಕೊಂಡಿದ್ದಕ್ಕೆ ಕಾರಣ ತಮ್ಮ ಪತ್ನಿ ಪ್ರಿಯಾ ಎಂದು ಸುದೀಪ್ ಬಹಿರಂಗಪಡಿಸಿದ್ದಾರೆ. ಜೊತೆಗೆ ಇಂತಹ ಅದ್ಭುತ ಸಿನಿಮಾ ಒಪ್ಪಿಕೊಳ್ಳುವಂತೆ ಮಾಡಿದ್ದಕ್ಕೆ ಪತ್ನಿಗೆ ಧನ್ಯವಾದ ಸಲ್ಲಿಸಿದ್ದಾರೆ.

‘ನಾನೊಂದು ಅದ್ಭುತ ಕೇಳಿದ್ದೇನೆ. ನೀನು ಒಮ್ಮೆ ಕೇಳು ಎಂದು ನನಗೆ ಪ್ರಿಯಾ ಒಂದು ವಾರದಿಂದ ಹೇಳುತ್ತಲೇ ಇದ್ದಳು. ಅವಳು ಹೇಳಿದ್ದಕ್ಕೆ ನಾನು ಕೊನೆಗೂ ಕತೆ ಕೇಳಲು ಒಪ್ಪಿಕೊಂಡೆ. ಅನೂಪ್ ನನಗೆ ಮೂರೂವರೆ ಗಂಟೆಗಳ ಕಾಲ ವಿವರವಾಗಿ ಕತೆ ಹೇಳಿದರು. ಅದರಲ್ಲೂ ಕೊನೆಯ ಅರ್ಧ ಗಂಟೆಯಂತೂ ಅವರು ಈ ಸಿನಿಮಾ ಬಗ್ಗೆ ಏನು ಕನಸು ಕಟ್ಟಿಕೊಂಡಿದ್ದಾರೆ ಎಂಬುದರ ಸ್ಪಷ್ಟ ಚಿತ್ರಣ ನನಗೆ ಸಿಕ್ಕಿತ್ತು. ಹೀಗಾಗಿ ನಾನು ಸಿನಿಮಾ ಒಪ್ಪಿಕೊಂಡೆ. ಇದಕ್ಕೆ ನಾನು ಪ್ರಿಯಾಗೆ ಧನ್ಯವಾದ ಹೇಳಲೇಬೇಕು’ ಎಂದಿದ್ದಾರೆ ಸುದೀಪ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ