ಅನಂತ್ ಅಂಬಾನಿ ಮದುವೆಗೆ ಆಹ್ವಾನವಿದ್ದರೂ ಕಿಚ್ಚ ಸುದೀಪ್ ಯಾಕೆ ಹೋಗಲಿಲ್ಲ, ಕಾರಣ ಬಯಲು

Krishnaveni K

ಸೋಮವಾರ, 15 ಜುಲೈ 2024 (15:00 IST)
ಬೆಂಗಳೂರು: ಶ್ರೀಮಂತ ಉದ್ಯಮಿ ಅನಂತ್ ಅಂಬಾನಿ ಮದುವೆಗೆ ದೇಶದ ಎಲ್ಲಾ ಸೆಲೆಬ್ರಿಟಿಗಳಿಗೂ ಆಹ್ವಾನ ನೀಡಲಾಗಿತ್ತು. ಹಲವು ಸಿನಿಮಾ ತಾರರೆಯರು ಮದುವೆಯಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದರು. ಕಿಚ್ಚ ಸುದೀಪ್ ಗೂ ಮದುವೆ ಆಹ್ವಾನವಿತ್ತು. ಆದರೂ ಅವರು ಯಾಕೆ ಭಾಗವಹಿಸಲಿಲ್ಲ ಎಂಬುದನ್ನು ಅವರೇ ರಿವೀಲ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಕೂಡಾ ಮದುವೆಯಲ್ಲಿ ಪತ್ನಿ ರಾಧಿಕಾ ಸಮೇತರಾಗಿ ಭಾಗಿಯಾಗಿದ್ದರು. ಯಶ್ ಪರಭಾಷಾ ನಿರ್ದೇಶಕರು, ನಟರೊಂದಿಗೆ ಮಾತನಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕನ್ನಡದಿಂದ ಪರಭಾಷೆಯಲ್ಲೂ ಗುರುತಿಸಿಕೊಂಡ ನಟರಲ್ಲಿ ಕಿಚ್ಚ ಸುದೀಪ್ ಕೂಡಾ ಒಬ್ಬರು. ಸುದೀಪ್ ಗೆ ಮದುವೆಗೆ ಆಹ್ವಾನವಿರಲಿಲ್ವಾ ಎಂದು ಅನೇಕರಿಗೆ ಪ್ರಶ್ನೆಯಿತ್ತು. ಇದಕ್ಕೆ ಅವರೇ ಉತ್ತರಿಸಿದ್ದಾರೆ.

‘ನನಗೂ ಮದುವೆಗೆ ಆಹ್ವಾನವಿತ್ತು. ಅದಕ್ಕಾಗಿ ನಾನು ಖಂಡಿತಾ ಧನ್ಯವಾದ ಹೇಳಲು ಬಯಸುತ್ತೇನೆ. ಹಾಗಿದ್ದರೂ ನನಗೆ ಹೋಗಲಾಗಲಿಲ್ಲ. ಅದಕ್ಕೆ ಕಾರಣವೂ ಇದೆ. ನಾನು ಮದುವೆಗೆ ಹೋಗೋಣ ಎಂದೇ ಅಂದುಕೊಂಡಿದ್ದೆ. ಆದರೆ ಈ ವೇಳೆ ನನಗೆ ಸ್ವಲ್ಪ ಹುಷಾರಿರಲಿಲ್ಲ, ಜ್ವರ ಬಂದಿತ್ತು. ಮದುವೆಗೆ ಬರುವವರಿಗೆ ಕೆಲವೊಂದು ಷರತ್ತುಗಳಿತ್ತು.

ಹುಷಾರಿಲ್ಲ, ಶೀತ, ಕೆಮ್ಮು ಇದ್ದರೆ ಒಳಗೆ ಎಂಟ್ರಿ ಇರಲಿಲ್ಲ. ಹೀಗಾಗಿ ಸುಮ್ಮನೇ ನಾನು ಅಲ್ಲಿ ಹೋಗಿ ಎಂಟ್ರಿ ಸಿಗದೇ ಅದು ದೊಡ್ಡ ಸುದ್ದಿಯಾಗುವುದಕ್ಕಿಂತ ಹೋಗದೇ ಇರುವುದೇ ಒಳ್ಳೆಯದು ಎಂದುಕೊಂಡೆ. ಯಾರಿಗೆ ಕರೆ ಮಾಡಬೇಕೋ ಅವರಿಗೆ ಕರೆ ಮಾಡಿ ಬರಲು ಆಗುತ್ತಿಲ್ಲ ಎಂದು ತಿಳಿಸಿದೆ’ ಎಂದು ಸುದೀಪ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ