ದೇವರ ಮೊರೆ ಹೋದ ಅಭಿಮಾನಿಗಳ ಕಂಡು ಭಾವುಕರಾದ ಕಿಚ್ಚ ಸುದೀಪ್

ಬುಧವಾರ, 21 ಏಪ್ರಿಲ್ 2021 (09:56 IST)
ಬೆಂಗಳೂರು: ಕಿಚ್ಚ ಸುದೀಪ್ ಆರೋಗ್ಯ ಚೇತರಿಕೆಗಾಗಿ ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಅಭಿಮಾನಿಗಳ ಈ ನಿಸ್ವಾರ್ಥ ಪ್ರೀತಿ ಕಂಡು ಕಿಚ್ಚ ಭಾವುಕರಾಗಿದ್ದಾರೆ.


ಚನ್ನಗಿರಿ ತಾಲೂಕಿನ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗ ತಮ್ಮ ಆರಾಧ್ಯ ದೈವದ ಆರೋಗ್ಯ ಸುಧಾರಿಸಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೊಬ್ಬ ವಿಕಲಚೇತನ ಅಭಿಮಾನಿ ದೇವರಿಗೆ ದೀರ್ಘದಂಡ ನಮಸ್ಕಾರ ಹಾಕಿ ಪ್ರಾರ್ಥನೆ ಸಲ್ಲಿಸಿದ್ದಾನೆ. ಈ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಕಿಚ್ಚ ಧನ್ಯವಾದ ಸಲ್ಲಿಸಿದ್ದಾರೆ.

‘ಈ ಪ್ರೀತಿಗೆ ಸದಾ ಚಿರಋಣಿ ಗೆಳೆಯರೇ. ಧನ್ಯವಾದ ಗೆಳೆಯರೇ’ ಎಂದು ಕಿಚ್ಚ ಕೈ ಮುಗಿದು ಭಾವುಕರಾಗಿ ಧನ್ಯವಾದ ಸಲ್ಲಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸುದೀಪ್ ಒಂದು ವಾರದಿಂದ ವಿಶ್ರಾಂತಿಯಲ್ಲಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂಬುದೇ ಅಭಿಮಾನಿಗಳ ಹಾರೈಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ