ಸುಖಾಂತ್ಯವಾಯ್ತು ಕಿರಿಕ್ ಪಾರ್ಟಿ ಹಾಡಿನ ವಿವಾದ

ಬುಧವಾರ, 30 ಜೂನ್ 2021 (09:26 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಅಭಿನಯದ ಕಿರಿಕ್ ಪಾರ್ಟಿ ಹಾಡೊಂದರ ಬಗ್ಗೆ ಲಹರಿ ಸಂಸ್ಥೆ ಜೊತೆಗಿದ್ದ ಹಕ್ಕು ಚ್ಯುತಿ ವಿವಾದ ಈಗ ಸುಖಾಂತ್ಯವಾಗಿದೆ.

Photo Courtesy: Twitter

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಿದ್ದ ಹಾಡೊಂದರಲ್ಲಿ ಶಾಂತಿ ಕ್ರಾಂತಿ ಹಾಡಿನ ತುಣುಕು ಬಳಸಿದ್ದರ ವಿರುದ್ಧ ಲಹರಿ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ರಕ್ಷಿತ್ ಶೆಟ್ಟಿ-ಲಹರಿ ವೇಣು ಜೊತೆಯಾಗಿ ಕೂತು ಮಾತುಕತೆ ನಡೆಸಿ ವಿವಾದಕ್ಕೆ ಮಂಗಳ ಹಾಡಿದ್ದಾರೆ.

ಈ ಬಗ್ಗೆ ರಕ್ಷಿತ್ ಶೆಟ್ಟಿ ಟ್ವಿಟರ್ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಕೇಸ್‍ ವಾಪಸ್ ಪಡೆದುಕೊಳ್ಳುವುದಾಗಿ ಲಹರಿ ವೇಣು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ