ಸಾಮಾನ್ಯವಾಗಿ ಚಿತ್ರ ಕಂಪ್ಲೀಟ್ ಆದ್ಮೇಲೆ ಟ್ರೈಲರ್ ರಿಲೀಸ್ ಮಾಡೋದು ನೋಡಿರ್ತೀವಿ ಆದ್ರೆ ಈ ತಂಡದ ವಿಶೇಷ ಏನೆಂದರೆ ಮೊದಲೇ ಚಿತ್ರತಂಡ ಎಂಟೂವರೆ ನಿಮಿಷಗಳ ದೀರ್ಘ ಟ್ರೇಲರ್ ಬಿಡುಗಡೆ ಮಾಡಿ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಂಡಿತ್ತು. ಖಾಸಗಿ ವಾಹಿನಿಯ ಅಗ್ನಿಸಾಕ್ಷಿ ದಾರಾವಾಹಿಯಲ್ಲಿ ಫೇಮಸ್ ಆಗಿದ್ದ ವಿಲನ್ ಮುನಿಕೃಷ್ಣಾ ರ ಮುರುಗ ಪಾತ್ರವನ್ನೇ ಕೊಂಚ ಬದಲಾಯಿಸಿ ಚಿತ್ರದ ಟೈಟಲ್ ಆಗಿಸಿ, ವಿಲನ್ ರನ್ನ ಚಿತ್ರದ ಹೀರೋ ಮಾಡ್ತಿರೋದು ‘ಕೊಡೆಮುರುಗ’ ಸಿನ್ಮಾದ ಇನ್ನೊಂದು ಆಕರ್ಷಣೆ. ಇವರಿಗೆ ನಾಯಕಿಯಾಗಿ ಪಲ್ಲವಿ ಗೌಡ ಬಣ್ಣಹಚ್ಚಿದ್ದಾರೆ. ಜೊತೆಗೆ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಸಹ ಮತ್ತೊಂದು ಮುಖ್ಯಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದೊಳಗೆ ನಡೆಯುವ ಸಿನಿಮಾದ ಕಥೆಯ ಎಳೆಯಲ್ಲಿ ಬರೋ ನಿರ್ದೇಶಕನ ಪಾತ್ರವನ್ನು ಸ್ವತಃ ಸುಬ್ರಹ್ಮಣ್ಯ ಅವರೇ ನಿಭಾಯಿಸಿದ್ದಾರಂತೆ.ಇನ್ನು ಈ ಚಿತ್ರಕ್ಕೆ ತ್ಯಾಗರಾಜ್ ಸಂಗೀತ, ರುದ್ರಮುನಿ ಛಾಯಾಗ್ರಹಣ, ಸಿ. ರವಿಚಂದ್ರನ್ ಸಂಕಲನವಿದ್ದು, ಈಗಾಗಲೇ ರಿಲೀಸ್ ಆದ ಚಿತ್ರದ ‘ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ’ ಅನ್ನುವ ಸೂಪರ್ ಲಿರಿಕಲ್ ವೀಡಿಯೋ ರಿಲೀಸ್ ಆಗಿ ಸದ್ದು ಮಾಡಿತ್ತು. ಸಧ್ಯ ಸಿನ್ಮಾ ರಿಲೀಸ್ ಗೆ ರೆಡಿಯಾಗಿದ್ದು ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲು ಸಿದ್ದತೆ ನಡೆಯುತ್ತಿದೆ. ಸಧ್ಯ ರಿಲೀಸ್ ಅಗಿರೋ ಚಿತ್ರದ ಜಲಕ್ ಗಳನ್ನ ನೋಡಿ ಎಂಜಾಯ್ ಮಾಡ್ತಾ ಈ ಸಲದ ಪ್ರೇಮಿಗಳ ದಿನವನ್ನ ಸೆಲೆಬ್ರೇಟ್ ಮಾಡಿ ಅಂತಿದೆ ಕೊಡೆಮುರುಗ ತಂಡ.