Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

Krishnaveni K

ಶನಿವಾರ, 7 ಜೂನ್ 2025 (16:07 IST)
ಬೆಂಗಳೂರು: ರೇಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಬಳಿಕ ಮಾತನಾಡಿರುವ ಮಡೆನೂರು ಮನು ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್ ಎಂದಿದ್ದಾರೆ.

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೇ ಮಡೆನೂರು ಮನು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸಹ ನಟಿ ಮೇಲೆ ಅತ್ಯಾಚಾರ, ಬಲವಂತದ ಮದುವೆ ಆರೋಪದಲ್ಲಿ ಜೈಲಿಗೆ ಹೋಗಿದ್ದ ಮಡೆನೂರು ಮನು ಅವರದ್ದು ಎನ್ನಲಾದ ಅಡಿಯೋ ಒಂದು ರಿಲೀಸ್ ಆಗಿತ್ತು. ಇದರಲ್ಲಿ ಶಿವಣ್ಣ, ದರ್ಶನ್ ಬಗ್ಗೆ ಮನು ಆಕ್ಷೇಪಾರ್ಹವಾಗಿ ಮಾತನಾಡುವ ಧ್ವನಿಯಿತ್ತು.

ಈ ಹಿನ್ನಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮನು ಮೇಲೆ ಬ್ಯಾನ್ ಹೇರಿದೆ. ಹೀಗಾಗಿ ಈಗಷ್ಟೇ ಚಿತ್ರರಂಗಕ್ಕೆ ಕಾಲಿಡುತ್ತಿರುವ ಮನುಗೆ ಒಂದೆಡೆ ರೇಪ್ ಕೇಸ್ ಆಗಿದ್ದರೆ ಇನ್ನೊಂದೆಡೆ ನಿಷೇಧದಿಂದಾಗಿ ಭವಿಷ್ಯವೇ ಕಮರಿಹೋಗಿದೆ.

ಈ ಹಿನ್ನಲೆಯಲ್ಲಿ ಇಂದು ರಿಲೀಸ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಮನು ‘ಶಿವಣ್ಣ ಚಿತ್ರರಂಗಕ್ಕೆ ಆಲದ ಮರವಿದ್ದಂತೆ. ಅವರ ಬಗ್ಗೆ ಎಲ್ಲಾ ನಾನು ಹಾಗೆ ಹೇಳಂಗೇ ಇಲ್ಲ ಸಾರ್. ಆ ಅಡಿಯೋ ನನ್ನದೇ ಅಲ್ಲ. ಶಿವಣ್ಣ ಜೊತೆ ಶ್ರೀಕಂಠ ಪಿಕ್ಚರ್ ನಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದೇನೆ. ಅವರ ಬರ್ತ್ ಡೇ ದಿವಸ ಆಶ್ರಮಕ್ಕೆ ಹೋಗಿ ಸೆಲೆಬ್ರೇಟ್ ಮಾಡ್ತೀವಿ. ಅವರಿಗೆ ಅನಾರೋಗ್ಯವಾಗಿದ್ದಾಗಲೂ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ಸಿದ್ದೆ. ಇನ್ನು, ಡಿ ಬಾಸ್ ಬಗ್ಗೆ ಮಾತಾಡಂಗೇ ಇಲ್ಲ. ಜೈಲಲ್ಲೂ ಹಲವು ಜನ ಅಭಿಮಾನಿಗಳು ಇದೆಲ್ಲಾ ಫೇಕ್, ತಲೆಕೆಡಿಸಿಕೊಳ್ಳಬೇಡಿ ಸರ್. ನಿಮಗೆ ನಾವು ಸಪೋರ್ಟ್ ಮಾಡ್ತೀವಿ ಎಂದಿದ್ದಾರೆ’ ಎಂದು ಮನು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ