ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥದಲ್ಲಿ ಕುಡ್ಲದ ತಾರೆಯರದ್ದೇ ದಂಡು!

ಮಂಗಳವಾರ, 4 ಜುಲೈ 2017 (08:38 IST)
ವಿರಾಜಪೇಟೆ: ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯೊತ್ತಿದರು. ವಿರಾಜ ಪೇಟೆಯ ಸೆರೆನಿಟಿ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನ ಈ ಜೋಡಿ ಪರಸ್ಪರ ಉಂಗುರ ಬದಲಾಯಿಸಿಕೊಂಡರು.

 
ರಕ್ಷಿತ್ ಹೇಳಿ ಕೇಳಿ ಮಂಗಳೂರಿನವರು. ಹಾಗಾಗಿ ಕುಡ್ಲ (ಮಂಗಳೂರು)ದ ತಾರೆಯರ ದಂಡೇ ಕಾರ್ಯಕ್ರಮದಲ್ಲಿ ನೆರೆದಿತ್ತು. ಹಿರಿತೆರೆ, ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಮಂಗಳೂರು ಮೂಲದ ಕಲಾವಿದರೆಲ್ಲಾ ಒಟ್ಟು ಸೇರಿದ್ದು ವಿಶೇಷವಾಗಿತ್ತು.

ಇವರಲ್ಲಿ ರಿಷಬ್ ಶೆಟ್ಟಿ,  ಯಜ್ಞಾ ಶೆಟ್ಟಿ, ಸೇರಿದಂತೆ ಕಿರಿಕ್ ಪಾರ್ಟಿ ಚಿತ್ರತಂಡವೇ ಅಲ್ಲಿ ನೆರೆದಿತ್ತು. ಅಂತೂ ಬಿಗಿ ಬಂದೋಬಸ್ತ್ ನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯರ ಸಮ್ಮುಖದಲ್ಲಿ ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡರು. ರಶ್ಮಿಕಾ ಪಿಂಕ್ ಬಣ್ಣದ ಉಡುಗೆ ತೊಟ್ಟಿದ್ದರೆ, ರಕ್ಷಿತ್ ಅದಕ್ಕೊಪ್ಪುವ ಸೂಟ್ ನಲ್ಲಿ ಮಿಂಚುತ್ತಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ