ಮಾಸ್ತಿ ಗುಡಿ ಶೂಟಿಂಗ್ ವೇಳೆ ಮೃತಪಟ್ಟ ಉದಯ್, ಅನಿಲ್ ಕುಟುಂಬಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ನೆರವು

ಮಂಗಳವಾರ, 22 ನವೆಂಬರ್ 2016 (10:46 IST)
ಬೆಂಗಳೂರು: ಮಾಸ್ತಿ ಗುಡಿ ಸಿನಿಮಾದ ಕ್ಲೈಮ್ಯಾಕ್ಸ್  ಚಿತ್ರೀಕರಣದ ವೇಳೆ ಅಚಾತುರ್ಯದಿಂದಾಗಿ ಸಾವನ್ನಪ್ಪಿದ ಖಳನಟರಾದ ಉದಯ್ ಮತ್ತು ಅನಿಲ್ ಕುಟುಂಬದವರಿಗೆ ಸಂಸದ ರಾಜೀವ್ ಚಂದ್ರಶೇಖರ್ ನೆರವಿಗೆ ಮುಂದಾಗಿದ್ದಾರೆ.

ಇಬ್ಬರೂ ನಟರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಪರಿಹಾರ ಹಣ ನೀಡಿದ್ದಾರೆ. ಸದಾ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಚಂದ್ರಶೇಖರ್ ಮತ್ತೊಮ್ಮೆ ಸಂತ್ರಸ್ತ ಕುಟುಂಬದ ನೆರವಿಗೆ ಬಂದಿದ್ದಾರೆ. ನಿನ್ನೆಯಷ್ಟೇ ಉದಯ್ ಕುಟುಂಬದವರು ನಮಗೆ ಸರ್ಕಾರದಿಂದಾಗಲೀ ಚಿತ್ರರಂಗದವರಿಂದಾಗಲೀ ಯಾವುದೇ  ಪರಿಹಾರ ಹಣ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದರು.

ಆದರೆ ಈ ಹಣವನ್ನು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೈಗೊಪ್ಪಿಸಿದ್ದು, ಅವರು ಖಳನಟರ ಕುಟುಂಬದವರಿಗೆ ಹಸ್ತಾಂತರಿಸಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ