ಪ್ರತಿಭಟನೆಗೆ ಬಗ್ಗಿಲ್ಲ “ನಾಗರಹಾವು”

ಕೃಷ್ಣವೇಣಿ. ಕೆ.

ಗುರುವಾರ, 20 ಅಕ್ಟೋಬರ್ 2016 (10:16 IST)
ಬೆಂಗಳೂರು: ನಟ ಸಾರ್ವಭೌಮ ವಿಷ್ಣುವರ್ಧನ್  ಗ್ರಾಫಿಕ್ ನಲ್ಲಿ ಕಾಣಿಸಿಕೊಂಡಿರುವ 201 ನೇ ಚಿತ್ರ “ನಾಗರಹಾವು” ಯಶಸ್ವಿಯಾಗಿ ಎರಡನೇ ವಾರಕ್ಕೆ ಮುನ್ನುಗ್ಗುತ್ತಿದೆ. ಈ ವಾರ ಬೇರೆ ಯಾವುದೇ ಚಿತ್ರಗಳು ಬಿಡುಗಡೆಯಾಗದೇ ಇರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

ಅಲ್ಲದೆ ಚಿತ್ರ ಬಿಡುಗಡೆಯಾದಾಗ ನಟಿ ರಮ್ಯಾ ವಿರುದ್ಧ ಕಾವೇರಿ ವಿವಾದ ವಿಚಾರದಲ್ಲಿ ಆಕ್ರೋಶಗೊಂಡಿರುವ ಮಂಡ್ಯ ಭಾಗ ಜನತೆ ಥಿಯೇಟರ್ ಮುಂದೆ ಪ್ರತಿಭಟನೆ ಮಾಡಿದ್ದರು. ಆದರೆ ಯಾವುದೇ ಗಲಾಟೆಯೂ ಚಿತ್ರಕ್ಕೆ ತೊಂದರೆ ಮಾಡಿಲ್ಲ. ಕಲೆಕ್ಷನ್ ಗೂ ತೊಂದರೆ ಕೊಟ್ಟಿಲ್ಲ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ.

ವಿಶೇಷವೆಂದರೆ ಇದೇ ಭಾಗದಲ್ಲಿ ಹೆಚ್ಚು ಕಲೆಕ್ಷನ್ ಆಗಿದೆ ಎನ್ನುತ್ತಿವೆ ಮುಲಗಳು. ವಿಷ್ಣುವರ್ಧನ್, ರಮ್ಯಾ ಅಭಿನಯವಿರುವ ಕಾರಣ ಚಿತ್ರಕ್ಕೆ ಯಾವುದೇ ತೊಂದರೆಯಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ