ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಬೀಸಿದ ಸುಮಲತಾಗೆ ಮೊದಲು ಕನ್ನಡ ಕಲಿಯಿರಿ ಎಂದ ನೆಟ್ಟಿಗರು

Sampriya

ಸೋಮವಾರ, 9 ಜೂನ್ 2025 (15:35 IST)
Photo Courtesy X
ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾರಣ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ Arrest Kohli ಹ್ಯಾಶ್‌ ಟ್ಯಾಗ್‌ ಅಭಿಯಾನವನ್ನು ಶುರುಮಾಡಿದರು. 

ಕೊಹ್ಲಿ ಸಂಬಂಧ ಪರ ವಿರೋಧ ಚರ್ಚೆಗಳು ಜೋರಾಗುತ್ತಿರುವ ಬೆನ್ನಲ್ಲೇ ಮಾಜಿ ಸಂಸದೆ ಸುಮಲತಾ ಅಂಬರೀಶ್‌ ಅವರು ಈ ಬಗ್ಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.  ತಮಿಳು ಮತ್ತು ತೆಲುಗು ಚಿತ್ರರಂಗದ ಛಾಯಾಗ್ರಾಹಕ ಶಕ್ತಿ ಸರವಣನ್ ಅವರ ಬರಹವನ್ನು ಹಂಚಿಕೊಂಡು ಕೊಹ್ಲಿ ವಿರುದ್ಧ ಕತ್ತಿ ಮಸೆಯುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುಮಲತಾ ಅಂಬರೀಶ್ ಅವರ ಇಂಗ್ಲಿಷ್‌ನಲ್ಲಿ ಸುದೀರ್ಘವಾಗಿ ಬರೆದು ವಿರಾಟ್ ಕೊಹ್ಲಿ ವಿರುದ್ಧ ಮಾತನಾಡುವವರ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಪೋಸ್ಟ್ ನೋಡಿದ ನೆಟ್ಟಿಗರೊಬ್ಬರು ಮೊದಲು ನೀವು ಕನ್ನಡದಲ್ಲಿ ಬರೆದು ಹಾಕಿರಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. 

ಹಲೋ ಮೇಡಂ ಫಸ್ಟು ಕನ್ನಡದಲ್ಲಿ ಹಾಕಿರಿ ಆಮೇಲೆ ಇಂಗ್ಲಿಷ್, ಇಂಗ್ಲಿಸ್‌ನಿಂದ ಏನು ಕನ್ನಡ ಹುಟ್ಟಿಲ್ಲ ಕನ್ನಡ ಇಂದ ಇಂಗ್ಲಿಷ್ ಹುಟ್ಟಿರುವುದು ಅದಕ್ಕೆ ನಾನು ಹೇಳುತ್ತಿರುವುದು ಫರ್ಸ್ಟ್‌ ಕನ್ನಡದಲ್ಲಿ ಪೋಸ್ಟ್ ಹಾಕಿ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ