ನಿಮಗೆ ಕನ್ನಡದವರು ಯಾರೂ ಕಾಣಲ್ವಾ? ಹೊಂಬಾಳೆ ಫಿಲಂಸ್ ವಿರುದ್ಧ ನೆಟ್ಟಿಗರು ಗರಂ

ಮಂಗಳವಾರ, 9 ಆಗಸ್ಟ್ 2022 (09:30 IST)
ಬೆಂಗಳೂರು: ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಕೆಜಿಎಫ್ ಸಿನಿಮಾ ಮೂಲಕ ದೇಶದಾದ್ಯಂತ ಚಿರಪರಿಚಿತವಾಗಿದೆ. ಆದರೆ ಇತ್ತೀಚೆಗೆ ಪರಭಾಷಿಕರನ್ನೇ ಬೆಳೆಸುತ್ತಿರುವುದು ಕನ್ನಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕೆಜಿಎಫ್ ಸಿನಿಮಾ ಬಳಿಕ ಹೊಂಬಾಳೆ ಫಿಲಂಸ್ ಕೆಲವು ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿವೆ. ಆದರೆ ಇದೆಲ್ಲದಕ್ಕೂ ಪರಭಾಷಾ ನಟರೇ ಹೀರೋಗಳು. ಸಲಾರ್, ಟೈಸನ್ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿತ್ತು. ಇವೆರಡರಲ್ಲೂ ಪರಭಾಷಿಕರೇ ನಾಯಕರು.

ಇದೀಗ ಮಲಯಾಳಂ ನಟ ಫಹಾದ್ ಫಾಸಿಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಹೊಂಬಾಳೆ ಫಿಲಂಸ್ ಅವರ ಜೊತೆಗೆ ಸಿನಿಮಾ ಮಾಡುವ ಬಗ್ಗೆ ಸುಳಿವು ನೀಡಿದೆ. ಇದರು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ನೀವು ಪರಭಾಷಾ ನಾಯಕರ ಹುಟ್ಟುಹಬ್ಬಕ್ಕೆ ಶುಭ ಕೋರುತ್ತೀರಿ, ಅವರ ಜೊತೆ ಸಿನಿಮಾ ಘೋಷಿಸುತ್ತೀರಿ. ಕನ್ನಡದವರು ಯಾರೂ ನಿಮಗೆ ಕಾಣಲ್ವಾ ಎಂದು ಕೆಲವರು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ