ಸಿಂಪಲ್ಲಾಗಿದೆ ನಿಖಿಲ್ ಮದುವೆ ಆಮಂತ್ರಣ: ಕುಮಾರಸ್ವಾಮಿ ಖುದ್ದು ಆಹ್ವಾನ

ಮಂಗಳವಾರ, 25 ಫೆಬ್ರವರಿ 2020 (09:19 IST)
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆಗೆ ಖುದ್ದಾಗಿ ಆಹ್ವಾನ ನೀಡಿದ್ದಾರೆ. ನಿಖಿಲ್ ಮದುವೆ ಆಮಂತ್ರಣ ಪತ್ರಿಕೆ ರೆಡಿಯಾಗಿದ್ದು ಸಿಂಪಲ್ಲಾಗಿದೆ.


ಏಪ್ರಿಲ್ 17 ರಂದು ವೃಷಭ ಲಗ್ನದಲ್ಲಿ 9.15 ರಿಂದ 9.45 ರೊಳಗಿನ ಸುಮುಹೂರ್ತದಲ್ಲಿ ನಿಖಿಲ್ ಮತ್ತು ರೇವತಿ ವಿವಾಹ ಸಮಾರಂಭ ನಡೆಯಲಿದೆ. ರಾಮನಗರದ ಜಾನಪದ ಲೋಕದ ಹತ್ತಿರ ‘ಸಪ್ತಪದಿ ಮಂಟಪ’ದಲ್ಲಿ ವಿವಾಹ ಸಮಾರಂಭ ನಡೆಯಲಿದೆ.

ಈ ಸಮಾರಂಭದ ಆಹ್ವಾನ ಪತ್ರಿಕೆ ಜತೆಗೆ ಖುದ್ದಿ ಕುಮಾರಸ್ವಾಮಿ ಕೈ ಬರಹದ ಆಮಂತ್ರಣ ಪ್ರತಿಯೂ ಇದೆ. ಇದರಲ್ಲಿ ಕುಮಾರಸ್ವಾಮಿ ಖುದ್ದಾಗಿ ತಾವೇ ಮಗನ ವಿವಾಹ ಸಮಾರಂಭಕ್ಕೆ ಆಗಮಿಸಿ ಆಶೀರ್ವದಿಸುವಂತೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ