ಕಾಂತಾರ ಸಿನಿಮಾಗಾಗಿ ನಾನ್ ವೆಜ್ ಬಿಟ್ಟಿದ್ದ ಚಿತ್ರತಂಡ!

ಗುರುವಾರ, 29 ಸೆಪ್ಟಂಬರ್ 2022 (08:20 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು, ಚಿತ್ರದ ಬಗ್ಗೆ ರಿಷಬ್ ಶೆಟ್ಟಿ ಸಂದರ್ಶನವೊಂದರಲ್ಲಿ ವಿಶೇಷ ಮಾಹಿತಿ ನೀಡಿದ್ದಾರೆ.

ಈ ಸಿನಿಮಾದಲ್ಲಿ ಕರಾವಳಿಯ ಭೂತಾರಾಧನೆ, ಕಂಬಳವನ್ನು ತೋರಿಸಲಾಗಿದೆ. ಸಿನಿಮಾಗಾಗಿಯೇ ಕೆರಾಡಿಯಲ್ಲಿ ಬೃಹತ್ ಸೆಟ್ ಹಾಕಲಾಗಿತ್ತಂತೆ.

ಭೂತಾರಾಧನೆಗೆ ತುಳುನಾಡಿನಲ್ಲಿ ಅಪಾರ ಭಕ್ತಿ, ಭಾವವಿದೆ. ಹೀಗಾಗಿ ಭೂತಕೋಲ ಶೂಟಿಂಗ್ ಮಾಡುತ್ತಿದ್ದ ಅಷ್ಟೂ ದಿನ ಸೆಟ್ ನೊಳಗೆ ಮಾಂಸಾಹಾರವನ್ನು ತರಲಾಗುತ್ತಿರಲಿಲ್ಲವಂತೆ. ಶೂಟಿಂಗ್ ಎಂದರೂ ದೈವದ ಮೇಲಿನ ಭಕ್ತಿಯನ್ನು ಅದೇ ರೀತಿ ನಡೆಸಿಕೊಂಡು ಬಂದಿದ್ದೇವೆ ಎಂದಿದ್ದಾರೆ ರಿಷಬ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ