ತಮಿಳುನಾಡಿನಲ್ಲೂ ಕನ್ನಡ ಸಿನಿಮಾಗಳಿಗೆ ತಡೆ ಬೆದರಿಕೆ

ಭಾನುವಾರ, 1 ಅಕ್ಟೋಬರ್ 2023 (09:10 IST)
ಚೆನ್ನೈ: ಕಾವೇರಿ ವಿವಾದದ ಹಿನ್ನಲೆಯಲ್ಲಿ ಕನ್ನಡ-ತಮಿಳು ಸಿನಿಮಾಗಳ ನಡುವೆ ಸಂಘರ್ಷ ಶುರುವಾಗಿದೆ. ಮೊನ್ನೆಯಷ್ಟೇ ಕರವೇ ಕಾರ್ಯಕರ್ತರು ತಮಿಳು ನಟ ಸಿದ್ಧಾರ್ಥ್ ಸಿನಿಮಾ ಪ್ರಚಾರಕ್ಕೆ ಅಡ್ಡಿಪಡಿಸಿದ್ದರು.

ಇದರ ಬೆನ್ನಲ್ಲೇ ಈಗ ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳಿಗೆ ತಡೆ ಒಡ್ಡುತ್ತೇವೆ ಎಂದು ಎನ್ ಟಿಕೆ ಸಂಘಟನೆ ಬೆದರಿಕೆ ಹಾಕಿದೆ. ತಮಿಳಿನಲ್ಲೂ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತವೆ. ನೀವು ತಮಿಳು ಸಿನಿಮಾಗಳಿಗೆ ಅಡ್ಡಿಪಡಿಸಿದರೆ ನಾವೂ ತಮಿಳುನಾಡಿನಲ್ಲಿ ಒಂದೇ ಒಂದು ಕನ್ನಡ ಸಿನಿಮಾ ಬಿಡುಗಡೆಯಾಗದಂತೆ ತಡೆಯಬಲ್ಲೆವು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಇದೇ ತಿಂಗಳು ಶಿವರಾಜ್ ಕುಮಾರ್ ನಾಯಕರಾಗಿರುವ ಘೋಸ್ಟ್ ಸಿನಿಮಾ ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ. ಇದೀಗ ತಮಿಳು ಸಂಘಟನೆಗಳ ಬೆದರಿಕೆ ಹಿನ್ನಲೆಯಲ್ಲಿ ಘೋಸ್ಟ್ ಸಿನಿಮಾಗೂ ತೊಂದರೆಯಾಗಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ