ರೇಣುಕಾಸ್ವಾಮಿ ಮರ್ಡರ್ ವೇಳೆ ಹಾಕಿದ್ದ ಚಪ್ಪಲಿಯಿಂದ ಪವಿತ್ರಾ ಗೌಡಗೆ ಕಂಟಕ

Krishnaveni K

ಬುಧವಾರ, 14 ಆಗಸ್ಟ್ 2024 (14:16 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಎ1 ಆರೋಪಿಯಾಗಿರುವ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಆಕೆಯ ಚಪ್ಪಲಿಯೇ ಈಗ ಪ್ರಮುಖ ಸಾಕ್ಷಿಯಾಗಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್ ಗೆ ಕರೆಸಿ ದರ್ಶನ್ ಆಂಡ್ ಗ್ಯಾಂಗ್ ಹಲ್ಲೆ ನಡೆಸಿತ್ತು. ಇದರ ಪರಿಣಾಮ ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಎನ್ನುವುದು ಆರೋಪ. ಹಲ್ಲೆ ವೇಳೆ ಪವಿತ್ರಾ ಗೌಡ ಕೂಡಾ ಪಟ್ಟಣಗೆರೆ ಶೆಡ್ ಗೆ ಬಂದಿದ್ದರು. ಅವರೂ ಕೂಡಾ ತಮ್ಮ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದಿದ್ದರು ಎಂದು ಆರೋಪಿಸಲಾಗಿದೆ.

ಇದೀಗ ಪವಿತ್ರಾ ಕೂಡಾ 17 ಆರೋಪಿಗಳಲ್ಲಿ ಒಬ್ಬರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪವಿತ್ರಾ ಧರಿಸಿದ್ದ ಚಪ್ಪಲಿಯನ್ನು ಅವರ ಮನೆ ಮಹಜರಿನ ವೇಳೆ ವಶಪಡಿಸಿಕೊಂಡಿದ್ದ ಪೊಲೀಸರು ಎಫ್ಎಸ್ಎಲ್ ವರದಿಗೆ ಕಳುಹಿಸಿದ್ದರು. ಇದೀಗ ಅವರ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಸಾಬೀತಾಗಿದೆ.

ಇನ್ನು, ಪಟ್ಟಣಗೆರೆ ಶೆಡ್ ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ಸೇವಿಸಿದ್ದ ಬಿಯರ್ ಬಾಟಲಿಯೊಂದರಲ್ಲೂ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ. ಈ ಎರಡೂ ವಿಚಾರಗಳೂ ಈಗ ಆರೋಪಿಗಳ ವಿರುದ್ಧ ಮತ್ತಷ್ಟು ಸಾಕ್ಷ್ಯ ಒದಗಿಸಿದಂತಾಗಿದೆ. ಅದರಲ್ಲೂ ಎ1 ಪವಿತ್ರಾ ಗೌಡ ಚಪ್ಪಲಿಯೇ ಈಗ ಆಕೆಗೆ ಕಂಟಕವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ