ಬಿಳಿ ಸೀರೆಯುಟ್ಟ ಪಾತ್ರ ಮಾಡಲ್ಲ ಎಂದು ಸಿನಿಮಾವನ್ನೇ ತಿರಸ್ಕರಿಸಿದ ಪೂಜಾ ಹೆಗ್ಡೆ

Krishnaveni K

ಶುಕ್ರವಾರ, 2 ಫೆಬ್ರವರಿ 2024 (10:10 IST)
ಹೈದರಾಬಾದ್: ಟಾಲಿವುಡ್ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಯಾಕೋ ಒಂದೊಂದೇ ಸಿನಿಮಾದಿಂದ ಒಂದಲ್ಲಾ ಒಂದು ಕಾರಣದಿಂದ ಹೊರಬರುತ್ತಿದ್ದಾರೆ.

ಇದೀಗ ಸಾಯಿ ಧರಮ್ ತೇಜ ನಾಯಕರಾಗಿದ್ದ ಹೊಸ ಸಿನಿಮಾದ ನಾಯಕಿ ಪಾತ್ರದಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ. ಅದಕ್ಕ ಕಾರಣವೂ ವಿಚಿತ್ರವಾಗಿದೆ. ಹೊಸ ಸಿನಿಮಾ ಒಪ್ಪಿಕೊಂಡ ಪೂಜಾಗೆ ಸಿನಿಮಾದಲ್ಲಿ ಹೆಚ್ಚಿನ ಸಮಯವೂ ತಾವು ಬಿಳಿ ಸೀರೆ ಉಟ್ಟುಕೊಂಡು ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂದು ಗೊತ್ತಾಗಿದೆ. ಹೀಗಾಗಿ ಪಾತ್ರವೇ ಬೇಡವೆಂದು ಚಿತ್ರದಿಂದ ಹೊರನಡೆದಿದ್ದಾರಂತೆ!

ಹೀಗೆ ಒಂದು ಸಿನಿಮಾದಲ್ಲಿ ನಾಯಕಿ ಪಾತ್ರ ಬದಲಾಗುವುದು ಹೊಸದೇನಲ್ಲ. ಪೂಜಾಗೂ ಇದು ಹೊಸದಲ್ಲ. ಆದರೆ ಈ ಸಿನಿಮಾದಲ್ಲಿ ಮಾತ್ರ ಅವರು ಪಾತ್ರ ತಿರಸ್ಕರಿಸಲು ನೀಡಿದ ಕಾರಣ ವಿಚಿತ್ರವಾಗಿದೆ. ಈ ಸಿನಿಮಾದಲ್ಲಿ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಅವಕಾಶ ಸಿಗದೇ ಇದ್ದಿದ್ದಕ್ಕೆ ಪೂಜಾ ಹೊರಬಂದಿದ್ದಾರೆ.

ಇದುವರೆಗೆ ಪೂಜಾ ಗ್ಲಾಮರಸ್ ಪಾತ್ರಗಳನ್ನೇ ಮಾಡುತ್ತಾ ಬಂದಿದ್ದಾರೆ. ಪ್ರತೀ ಸಿನಿಮಾದಲ್ಲೂ ಕಲರ್ ಫುಲ್ ಪಾತ್ರಗಳಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈಗ ಇದ್ದಕ್ಕಿದ್ದಂತೆ ಡಿ ಗ್ಲಾಮರಸ್ ಪಾತ್ರ ಮಾಡಬೇಕು ಎಂದಾಗ ಹಿಂದೇಟು ಹಾಕಿದ್ದಾರೆ.

ಇದಕ್ಕೆ ಮೊದಲು ಮಹೇಶ್ ಬಾಬು ನಾಯಕರಾಗಿದ್ದ ಗುಂಟೂರು ಖಾರಂ ಸಿನಿಮಾದಿಂದಲೂ ಕೊನೆಯ ಕ್ಷಣದಿಂದ ಹಿಂದೆ ಸರಿದಿದ್ದರು. ಅದಕ್ಕೆ ನಿಜವಾದ ಕಾರಣವೇನೆಂದು ಇನ್ನೂ ಬಯಲಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ