ಮಾವ ಕೆ ಶಿವರಾಮ್ ಅಂತ್ಯಸಂಸ್ಕಾರ ಮುಗಿದ ಬೆನ್ನಲ್ಲೇ ಸಿಸಿಎಲ್ ಆಡಿದ ಪ್ರದೀಪ್ ಬೋಗಡಿ

Krishnaveni K

ಸೋಮವಾರ, 4 ಮಾರ್ಚ್ 2024 (09:25 IST)
Photo Courtesy: Twitter
ಹೈದರಾಬಾದ್: ಮಾವ ಕೆ ಶಿವರಾಜ್ ಅಂತ್ಯ ಸಂಸ್ಕಾರ ಮುಗಿದ ಬೆನ್ನಲ್ಲೇ ಹೈದರಾಬಾದ್ ಗೆ ತೆರಳಿದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆಟಗಾರ ಪ್ರದೀಪ್ ಬೋಗಡಿ ಕರ್ನಾಟಕ ಬುಲ್ಡೋಜರ್ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.


ಮೊನ್ನೆಯಷ್ಟೇ ಪ್ರದೀಪ್ ಮಾವ ನಟ, ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್ ನಿಧನರಾಗಿದ್ದರು. ಶಿವರಾಮ್ ಆಸ್ಪತ್ರೆಯಲ್ಲಿದ್ದಾಗಲೂ ಪ್ರದೀಪ್ ಶಾರ್ಜಾದಲ್ಲಿ ಕರ್ನಾಟಕ ಬುಲ್ಡೋಜರ್ ಪದ ಸಿಸಿಎಲ್ ಆಡುತ್ತಿದ್ದರು. ಆದರೆ ಮಾವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಆಸ್ಪತ್ರೆಗೆ ಬಂದಿದ್ದರು. ಬಳಿಕ ಶಿವರಾಮ್ ಅಂತ್ಯ ಸಂಸ್ಕಾರ ಮುಗಿಯುವವರೆಗೂ ಕುಟುಂಬದ ಜೊತೆಗಿದ್ದರು.

ಅಂತ್ಯ ಸಂಸ್ಕಾರ ಮುಗಿದೊಡನೇ ಮತ್ತೆ ಸಿಸಿಎಲ್ ಆಡಲು ಹೈದರಾಬಾದ್ ಗೆ ಬಂದಿದ್ದಾರೆ. ರಾಜೀವ್ ಗಾಂಧಿ ಮೈದಾನದಲ್ಲಿ ಚೆನ್ನೈ ತಂಡದ ವಿರುದ್ಧ ಸಿಸಿಎಲ್ ಪಂದ್ಯದಲ್ಲಿ ಪ್ರದೀಪ್ ಭಾಗಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಪ್ರದೀಪ್ ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿ ಕಿಚ್ಚ ಸುದೀಪ್ ತಂಡಕ್ಕೆ ಅಗತ್ಯವಾಗಿತ್ತು.

ತಂಡಕ್ಕೆ ಅಗತ್ಯವಿದ್ದಾಗ ವೈಯಕ್ತಿಕ ನೋವನ್ನೂ ಮರೆತು ಬಂದ ಪ್ರದೀಪ್ ಅರ್ಧಶತಕ ಸಿಡಿಸಿದರು. ಬಳಿಕ ಈ ಇನಿಂಗ್ಸ್ ನ್ನು ಅವರು ತಮ್ಮ ಮಾವ ಕೆ ಶಿವರಾಮ್ ಗೆ ಅರ್ಪಿಸಿದ್ದಾರೆ. ಪ್ರದೀಪ್ ಆಟಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ