ಉಪೇಂದ್ರ ನಮಗಷ್ಟೇ ಸೀಮಿತವಲ್ಲ, ಅವರು ಕರ್ನಾಟಕದ ಮಗ: ಪ್ರಿಯಾಂಕಾ ಉಪೇಂದ್ರ

ಶನಿವಾರ, 12 ಆಗಸ್ಟ್ 2017 (15:45 IST)
ಉಪೇಂದ್ರ ರಾಜಕೀಯ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಪತ್ನಿ ಪ್ರಿಯಾಂಕಾ ಉಪೇಂದ್ರ, ನಾವು ಖಂಡಿತಾ ಅವರನ್ನ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ, ಅವರು ನಮ್ಮ ಮನೆಗೆ ಸೀಮಿತವಲ್ಲ ಕರ್ನಾಟಕದ ಮಗ ಎಂದು ಹೇಳಿದ್ದಾರೆ.  

ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ಇದು ನಿಜಕ್ಕೂ ಹೆಮ್ಮೆ ಎನಿಸುತ್ತೆ. ಖಾಕಿ ಬಟ್ಟೆ ಹಾಕಿಕೊಂಡು ಸುದ್ದಿಗೋಷ್ಠಿ ನಡೆಸಿದರು.ಖಾಕಿ ಬಟ್ಟೆ ಕೆಲಸದ ಪ್ರತೀಕ. ಕಾಯಕವೇ ಕೈಲಾಸ ಎಂಬುದು ಅವರ ನಂಬಿಕೆ ಎಂದಿದ್ದಾರೆ.

ಇದೇವೇಳೆ, ಸಿನಿಮಾ ಮತ್ತು ಎರಡನ್ನೂ ಹೇಗೆ ಸಮತೋಲನ ಮಾಡುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ರಾಜಕೀಯದಲ್ಲಿ ತೊಡಗಿಸಿಕೊಂಡು ಸಿನಿಮಾ ಮಾಡುವುದು ಕಷ್ಟ. ಎರಡೂ ಫುಲ್ ಟೈಂ ಕೆಲಸವಾಗಿರುವುದರಿಂದ ಎರಡರಲ್ಲೂ ಮುಂದುವರೆಯುವುದು ಕಷ್ಟ. ಒಂದೆರಡು ಸಿನಿಮಾಗಳನ್ನ ಮಾಡುತ್ತಿದ್ದಾರೆ. ಅವುಗಳನ್ನ ಮುಗಿಸಿ ಸಂಪೂರ್ಣ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ