ಕಥಾ ಸಂಗಮ ಅಡಿಯೋ ರಿಲೀಸ್ ಮಾಡಲಿರುವ ಪುನೀತ್ ರಾಜ್ ಕುಮಾರ್

ಗುರುವಾರ, 21 ನವೆಂಬರ್ 2019 (10:01 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ಮಾಣದ ಕಥಾ ಸಂಗಮ ಸಿನಿಮಾ ಧ‍್ವನಿಸುರುಳಿ ಬಿಡುಗಡೆ ಸಮಾರಂಭ ಇಂದು ಸಂಜೆ ನಡೆಯಲಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಬಿಡುಗಡೆ ಮಾಡಲಿದ್ದಾರೆ.


ಇಂದು ಸಂಸ ಹೊರ ಸಭಾಂಗಣದಲ್ಲಿ ಸಂಜೆ 5.30 ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಈಗಾಗಲೇ ರಿಷಬ್ ಅಭಿಮಾನಿಗಳಿಗೂ ಮುಕ್ತ ಆಹ್ವಾನ ನೀಡಿದ್ದಾರೆ.

ಇಡೀ ಚಿತ್ರತಂಡವೇ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದು, ಅವರೊಂದಿಗೆ ಸಂವಾದವನ್ನೂ ನಡೆಸಬಹುದು. ಜತೆಗೆ ಸಂಗೀತ ಸಂಜೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ