ಪುನೀತ್ ನಿವಾಸದಿಂದ ಹೊರಬಂದ ಗನ್ ಮ್ಯಾನ್ ಚಲಪತಿ

ಶುಕ್ರವಾರ, 17 ಜೂನ್ 2022 (16:35 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಜನರ ನಡುವೆ ಸುರಕ್ಷಿತವಾಗಿ ಕರೆದೊಯ್ಯುತ್ತಿದ್ದ ಅವರ ಬಲಗೈ ಬಂಟ, ಗನ್ ಮ್ಯಾನ್ ಚಲಪತಿ ಕೆಲಸ ಬಿಟ್ಟು ಊರಿಗೆ ಮರಳಿದ್ದಾರೆ.

ಪುನೀತ್ ರನ್ನು ದೇವರಂತೆ ಆರಾಧಿಸುತ್ತಿದ್ದ ಚಲಪತಿ ಅವರ ನಿಧನದ ಬಳಿಕ ತೀರಾ ಕುಗ್ಗಿಹೋಗಿದ್ದರು. ಚಲಪತಿಯವರನ್ನು ಸ್ವಂತ ತಮ್ಮನಂತೇ ಪುನೀತ್ ನೋಡಿಕೊಂಡಿದ್ದರು. ಆದರೆ ಈಗ ಅವರೇ ಇಲ್ಲದ ಮೇಲೆ ಅಲ್ಲಿರಲು ಮನಸ್ಸಾಗದೇ ತಮ್ಮ ಊರಿಗೆ ಮರಳಿದ್ದಾರೆ ಚಲಪತಿ.

ಮುಂದೆ ಬೇರೆ ನಟನಿಗೆ ಗನ್ ಮ್ಯಾನ್ ಆಗಿ ಕೆಲಸ ಮಾಡಲು ಇಷ್ಟಪಡದ ಚಲಪತಿ ಬೇರೆ ಏನಾದರೂ ಬ್ಯುಸಿನೆಸ್ ಮಾಡಿಕೊಂಡು ಜೀವನ ನಡೆಸುತ್ತೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ