ಕಾಲಿಗೆ ಬೀಳುವ ಅಭಿಮಾನಿಗಳಿಗೆ ರಜನೀಕಾಂತ್ ಹೇಳಿದ್ದು ಒಂದೇ ಮಾತು!

ಶುಕ್ರವಾರ, 29 ಡಿಸೆಂಬರ್ 2017 (08:22 IST)
ಚೆನ್ನೈ: ರಜನೀಕಾಂತ್ ಎಂದರೆ ಅಭಿಮಾನಿಗಳು ದೇವರಂತೆ ನೋಡುತ್ತಾರೆ. ಇದೇ ಅಭಿಮಾನದಲ್ಲಿ ಅಭಿಮಾನಿಗಳು ಹೋದಲೆಲ್ಲಾ ಕಾಲಿಗೆ ಬೀಳುವುದು ಸೂಪರ್ ಸ್ಟಾರ್ ಗೆ ಕೊಂಚವೂ ಇಷ್ಟವಾಗುತ್ತಿಲ್ಲ.
 

ರಾಜಕೀಯ ಪ್ರವೇಶಕ್ಕೆ ಮುನ್ನ ಅಭಿಮಾನಿಗಳ ಜತೆ ಸರಣಿ ಸಭೆ ನಡೆಸುತ್ತಿರುವ ರಜನೀಕಾಂತ್, ತಮ್ಮ ಬಳಿ ಬಂದು ಕಾಲಿಗೆ ಬಿದ್ದು ನಮಸ್ಕರಿಸುವ ಅಭಿಮಾನಿಗಳಿಗೆ ಬುದ್ಧಿ ಮಾತು ಹೇಳಿದ್ದಾರೆ.

‘ದಯವಿಟ್ಟು ನನ್ನ ಕಾಲಿಗೆ ಬೀಳಬೇಡಿ. ನಿಮ್ಮ ಹೆತ್ತವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಅವರ ಆಶೀರ್ವಾದ ತೆಗೆದುಕೊಳ್ಳಿ. ಹಣ, ಹೆಸರು ಇರುವವರ ಕಾಲಿಗೆ ಬಿದ್ದು ನಮಸ್ಕಾರ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ರಜನಿ ಬುದ್ಧಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ