ಮತ್ತೆ ವಿವಾದದ ಸುಳಿಯಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಶುಕ್ರವಾರ, 19 ಆಗಸ್ಟ್ 2016 (12:50 IST)
ಅದ್ಯಾಕೋ ಗೊತ್ತಿಲ್ಲ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ವಿವಾದ ಅಂದ್ರೆ ಅದೇನೋ ಪ್ರೀತಿ. ಆಗಾಗ್ಗೆ ಏನಾದರೊಂದು ಮಾಡಿ ವಿವಾದವನ್ನು ತನ್ನ ಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಇದೀಗ ಸುದೀಪ್ ಅವರ ಕೋಟಿಗೊಬ್ಬ-2 ಸಿನಿಮಾವನ್ನು ಹೊಗಳುವ ಭರದಲ್ಲಿ ವಿಷ್ಣುವರ್ಧನ್ ಹಾಗೂ ರಜಿನಿ ಅವರಿಗೆ ಅವಮಾನ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
 
ಮೊನ್ನೆ ರಾಮ್ ಗೋಪಾಲ್ ವರ್ಮಾ ಅವರು ಸುದೀಪ ಅವರ ಕೋಟಿಗೊಬ್ಬ-2 ಸಿನಿಮಾವನ್ನು ನೋಡಿ ಸುದೀಪ್ ಅಭಿನಯವನ್ನು ಹೊಗಳಿದ್ದರು.ಈ ಬಗ್ಗೆ ಟ್ವೀಟ್ ಮಾಡಿದ ಅವರು ಕೋಟಿಗೊಬ್ಬ  ಸಿನಿಮಾದಲ್ಲಿ ವಿಷ್ಣುವರ್ಧನ್ ಅಭಿನಯಕ್ಕಿಂತ  ನಿಮ್ಮ ಅಭಿನಯ ಕೋಟಿಗೊಬ್ಬ-2 ಸಿನಿಮಾದಲ್ಲಿ ಚೆನ್ನಾಗಿತ್ತು ಅಂತಾ ವಿಷ್ಣುಗೆ ಅವಹೇಳನ ಮಾಡಿದ್ದಾರೆ. ಅಲ್ಲದೇ ರಜನಿಕಾಂತ್ ಅವರ ರೋಬೋ ಸಿನಿಮಾವನ್ನು ನೀವು ನಿದ್ದೆಯಿಂದ ಎಬ್ಬಿಸಿ ಮಾಡಿದ್ರೂ ಚೆನ್ನಾಗಿ ಮಾಡುತ್ತಿರಿ ಆದ್ರೆ ನಿಮ್ಮ ಈಗ ಸಿನಿಮಾದ ಪಾತ್ರವನ್ನು ರಜನಿ ಕನಸಿನಲ್ಲೂ ಮಾಡೋದಕ್ಕೆ ಸಾಧ್ಯ ಇಲ್ಲ ಅಂತಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ನಾನು ಅವರಷ್ಟು ದೊಡ್ಡ ನಟನಲ್ಲ.ಅವರ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ ಅಂದಿದ್ದಾರೆ. 
 
ಇನ್ನು ರಾಮ್ ಗೋಪಾಲ್ ಅವರು ಟ್ವೀಟ್ ವಿಷ್ಣು ಅಭಿಮಾನಿಗಳನ್ನು ಹಾಗೇ ಕನ್ನಡ ಚಿತ್ರರಂಗದವರನ್ನು ಕೆರಳಿಸಿದೆ. ನಿನ್ನೆ ಆರ್ ಜಿವಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಯಿತು. ವಿಷ್ಣು ಸೇನಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ರಾಮ್ ಗೋಪಲ್ ವರ್ಮಾ ಪ್ರತಿಕೃತಿ ದಹಿಸಿ, ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ರಾಮ್ ಗೊಪಾಲ್ ವರ್ಮಾರನ್ನ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ವಿಷ್ಣು ಸೇನಾ ಸಮಿತಿ, ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿತು. 
 

ವೆಬ್ದುನಿಯಾವನ್ನು ಓದಿ