ನಟಿ ರಮ್ಯಾ ಸಸ್ಯಾಹಾರಿಯಾಗಲು ಇವರೇ ಕಾರಣವಂತೆ!

ಶುಕ್ರವಾರ, 18 ಸೆಪ್ಟಂಬರ್ 2020 (10:23 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ 70 ನೇ ಜನ್ಮದಿನದ ಅಂಗವಾಗಿ ನಟಿ ರಮ್ಯಾ ಅವರ ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದು, ನಾನು ಕ್ರಮೇಣ ಸಸ್ಯಾಹಾರಿಯಾಗಲು ವಿಷ್ಣುದಾದನೇ ಕಾರಣ ಎಂದಿದ್ದಾರೆ.


ವಿಷ್ಣುವರ್ಧನ್ ಬಗೆಗಿನ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಮ್ಯಾ ‘ನನಗೆ ಡಾ.ರಾಜ್ ಕುಮಾರ್ ಬ್ಯಾನರ್ ನಲ್ಲಿ ಅಭಿ ಸಿನಿಮಾ ಸಿಕ್ಕಾಗ ಮೊದಲು ಕರೆ ಮಾಡಿ ಅಭಿನಂದಿಸಿದವರೇ ಅವರು. ನನ್ನ ತಂದೆಗೂ ಆಪ್ತರಾಗಿದ್ದರು. ಯೋಗ ಧ್ಯಾನದ ಬಗ್ಗೆ ಹೇಳಿದರು. ಕ್ರಮೇಣವಾಗಿ ನಾನು ಸಸ್ಯಾಹಾರಿಯಾಗಲು ಪ್ರೇರಣೆಯಾದರು. ಭಾರತಿ ಅಮ್ಮನೂ ನನಗೆ ಸದಾ ಪ್ರೇರಣೆ. ಅವರ ಪ್ರೀತಿಯನ್ನು ಯಾವತ್ತಿಗೂ ಮರೆಯಲಾರೆ’ ಎಂದು ಸ್ಮರಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ