ಬೀದಿಗಿಳಿದು ಸೇನೆ ಬೆಂಬಲಕ್ಕೆ ನಿಲ್ಲುವಂತೆ ಕರೆ ನೀಡಿದ ಉಪೇಂದ್ರ

ಗುರುವಾರ, 20 ಜುಲೈ 2017 (12:26 IST)
ದೇಶದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಟ್ವೀಟ್ ಮೂಲಕ ಗಮನ ಸೆಳೆಯುವ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಬೀದಿಗಿಳಿದು ಭಾರತ್ ಬಂದ್ ನಡೆಸುವ ಮೂಲಕ ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲಲು ಕರೆ ನೀಡಿದ್ದಾರೆ.

ಸಿಕ್ಕಿಂ ಗಡಿಯಲ್ಲಿ ನಮ್ಮ ಯೋಧರು ಯುದ್ಧ ಭೀತಿ ಎದುರಿಸುತ್ತಿದ್ದರೆ ದೇಶದ ಒಳಗಿರುವ ನಾವು ಕೆಲ ಕ್ಷುಲ್ಲಕ ವಿಷಯಗಳಿಗಾಗಿ ಕಿತ್ತಾಡುತ್ತಿದ್ದೇವೆ. ಇಸ್ರೇಲ್ ದೇಶದಿಂದ ನಾವು ಬಹಳಷ್ಟು ಕಲಿಯುವುದಿದೆ. ನಮಗೆ ಆಳುವ ಯೋಗ್ಯತೆ ಇಲ್ಲವೆ..? ನಾವು ಆಳಿಸಿಕೊಳ್ಳಲು ಸೂಕ್ತವೇ..? ನಾವ್ಯಾಕೆ ಭಾರತ್ ಬಂದ್ ಮಾಡಿ ಬೀದಿಗಿಳಿದು ನಮ್ಮ ಯೋಧರ ಬೆಂಬಲಕ್ಕೆ ನಿಲ್ಲಬಾರದು..? ಈ ಮೂಲಕ ಚೀನಾಗೆ ಎಚ್ಚರಿಕೆ ನೀಡಬಹುದಲ್ಲವೇ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.


Any how We are known for BANDHS. why don't we do INDIA BANDH and come out to streets in large numbersTo support our soldiers and warn china

— Upendra (@nimmaupendra) July 19, 2017
 

ವೆಬ್ದುನಿಯಾವನ್ನು ಓದಿ