ನಾವು ಕಲಾವಿದರು, ಪಾಕಿಸ್ತಾನದಿಂದ ಬಂದಿದ್ದೀವಾ? ಲೇವಡಿ ಮಾಡಿದವರಿಗೆ ರಾಕಿಂಗ್ ಸ್ಟಾರ್ ಕೊಟ್ಟರು ಏಟು

ಬುಧವಾರ, 20 ಮಾರ್ಚ್ 2019 (15:41 IST)
ಮಂಡ್ಯ: ಸುಮಲತಾ ಅಂಬರೀಶ್ ಪರ ಪ್ರಚಾರಕ್ಕಿಳಿದಿದ್ದಕ್ಕೆ ಟಾಂಗ್ ಕೊಟ್ಟ ಕೆಲವು ರಾಜಕೀಯ ನಾಯಕರಿಗೆ ರಾಕಿಂಗ್ ಸ್ಟಾರ್ ಯಶ್ ತಿರುಗೇಟು ನೀಡಿದ್ದಾರೆ.


ಕಲಾವಿದರಿಗೆ ಇಲ್ಲಿ ಏನು ಕೆಲಸ ಎಂದೆಲ್ಲಾ ಮಾತನಾಡುತ್ತಾರಲ್ಲಾ. ನಾವೇನು ಪಾಕಿಸ್ತಾನದಿಂದ ಬಂದಿದ್ದೀವಾ? ಇಲ್ಲಿನ ಕಾವೇರಿ ನೀರು, ಕಬ್ಬಿನ ಹಾಲು ಕುಡಿದು, ಮೈಸೂರು, ಮಂಡ್ಯ ಮೂಲಕವೇ ಬೆಂಗಳೂರಿಗೆ ಹೋಗಿ ಬದುಕು ಕಟ್ಟಿಕೊಂಡಿದ್ದೀವಿ ಎಂದು ಯಶ್ ಖಡಕ್ ಆಗಿ ಹೇಳಿದ್ದಾರೆ.

ನಾವು ಯಾರು ಯಾವ ರಾಜಕೀಯ ಪಕ್ಷ ಎಂದು ಇಲ್ಲಿಗೆ ಬಂದಿಲ್ಲ. ಇಲ್ಲಿನ ಜನ ನಾನು, ದರ್ಶನ್ ಬಂದಿದ್ದೇವೆ ಎಂದಿದ್ದಕ್ಕೆ ಇಲ್ಲಿಗೆ ಬಂದಿದ್ದೇವೆ ಎಂದು ಕೆಲವರು ಹೇಳಿದ್ರು. ಆದರೆ ಜನ ನಮ್ಮನ್ನು ನೋಡಲು ಬಂದಿದ್ದಲ್ಲ. ಇಲ್ಲಿನ ಜನರ ದೃಷ್ಟಿ ಕೇವಲ ನಮ್ಮ ಮೇಲಿಲ್ಲ. ಅಂಬರೀಶ್ ಅಣ್ಣನ ಮೇಲಿನ ಪ್ರೀತಿಗೆ ಬಂದಿದ್ದಾರೆ ಎಂದು ಯಶ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ