ಹೆಚ್ 1 ಎನ್ 1 ಕಾಯಿಲೆಗೆ ಬಲಿಯಾದ ಸ್ಯಾಂಡಲ್ ವುಡ್ ನಿರ್ದೇಶಕ ಶಂಕರಲಿಂಗ ಸುಗ್ಗನಹಳ್ಳಿ

ಶುಕ್ರವಾರ, 16 ನವೆಂಬರ್ 2018 (14:54 IST)
ಬೆಂಗಳೂರು : ಅನಾರೋಗ್ಯದ ಹಿನ್ನಲೆಯಲ್ಲಿ  ಸ್ಯಾಂಡಲ್ ವುಡ್ ನಿರ್ದೇಶಕ ಶಂಕರಲಿಂಗ ಸುಗ್ಗನಹಳ್ಳಿ ನಿಧನರಾಗಿದ್ದಾರೆ.


ನಿರ್ದೇಶಕ ಶಂಕರ ಲಿಂಗ ಅವರು  ಹೆಚ್ 1 ಎನ್ 1 ಕಾಯಿಲೆಗೆ ತುತ್ತಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ 12 ಗಂಟೆಗೆ ನಿಧನರಾಗಿದ್ದಾರೆ. ಅವರ ಅಂತ್ಯ ಸಂಸ್ಕಾರ ಇಂದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸುಗ್ಗನಹಳ್ಳಿಯಲ್ಲಿ ನಡೆಯಲಿದೆ.


ಇವರು ಮಹಾದಾಸೋಹಿ ಶರಣ ಬಸವ, ಏಳು ಕೋಟಿ ಮಾರ್ತಾಂಡ ಬೈರವ, ವಿಜಯಕಂಕಣ, ಕಡ್ಲಿಮಟ್ಟಿ ಸ್ಟೇಶನ್ ಮಾಸ್ಟರ್, ಪ್ರೇಮ ದೇವತೆ, ಅಡ್ನಾಡಿ ಅಳಿಯ ಸೇರಿದಂತೆ ಹಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ