ಸಿನಿ ಪ್ರೇಮಿಗಳಿಗೆ ಇಂದು ಬಂಪರ್

ಶುಕ್ರವಾರ, 14 ಏಪ್ರಿಲ್ 2023 (09:00 IST)
ಬೆಂಗಳೂರು: ಶುಕ್ರವಾರವೆಂದರೆ ಗಾಂಧಿ ನಗರದ ಚಟುವಟಿಕೆಗಳು ಜೋರಾಗುತ್ತವೆ. ಏಪ್ರಿಲ್ 14 ಎಂದರೆ ಸ್ಯಾಂಡಲ್ ವುಡ್ ಗೆ ಒಂದು ರೀತಿಯಲ್ಲಿ ಲಕ್ಕಿ ಡೇಟ್ ಎನ್ನುವ ರೀತಿ ಆಗಿದೆ. ಇಂದು ಸಿನಿ ರಸಿಕರಿಗೆ ಬಂಪರ್ ಆಫರ್ ಸಿಗಲಿದೆ.

ರಮೇಶ್ ಅರವಿಂದ್ ನಾಯಕರಾಗಿರುವ ಶಿವಾಜಿ ಸುರತ್ಕಲ್ ಸಿನಿಮಾದ ಎರಡನೇ ಭಾಗ ಇಂದು ಥಿಯೇಟರ್ ನಲ್ಲಿ ತೆರೆ ಕಾಣುತ್ತಿದೆ. ಶಿವಾಜಿ ಸುರತ್ಕಲ್ ಭಾಗ 1 ಭಾರೀ ಸಕ್ಸಸ್ ಕಂಡಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರದ ಸಿನಿಮಾದಲ್ಲಿ ರಮೇಶ್ ಒಬ್ಬ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ನಟ ಕೋಮಲ್ ಕುಮಾರ್ ಬಹಳ ಸಮಯದ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಉಂಡೆ ನಾಮ. ಈ ಕಾಮಿಡಿ ಎಂಟರ್ ಟೈನರ್ ಸಿನಿಮಾ ಇಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.

ಇದರ ಜೊತೆಗೆ ಒಟಿಟಿ ಪ್ರೇಕ್ಷಕರಿಗಾಗಿ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ನೂರು ಕೋಟಿ ಗಳಿಸಿದ್ದ ಸಿನಿಮಾ ಕಬ್ಜ ಬಹುಭಾಷೆಗಳಲ್ಲಿ ಇಂದು ಪ್ರಸಾರವಾಗುತ್ತಿದೆ. ಇದು ಅಮೆಝೋನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ‍್ಯವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ