ಪುನೀತ್ ಗಾಗಿ ಮತ್ತೆ ಒಂದಾಗಲಿದೆ ಸ್ಯಾಂಡಲ್ ವುಡ್

ಗುರುವಾರ, 9 ಡಿಸೆಂಬರ್ 2021 (09:25 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಡೀ ದಕ್ಷಿಣ ಭಾರತೀಯ ಚಿತ್ರರಂಗದವರನ್ನು ಕರೆದು ನಮನ ಕಾರ್ಯಕ್ರಮವೇರ್ಪಡಿಸಿತ್ತು.

ಇದೀಗ ಮತ್ತೆ ಪ್ರೀತಿಯ ಅಪ್ಪುಗಾಗಿ ಇಡೀ ಚಿತ್ರರಂಗ ಒಂದಾಗುತ್ತಿದೆ. ಈ ಬಾರಿ ಕಾರ್ಯಕ್ರಮವನ್ನು ಜೀ ಕನ್ನಡ ಆಯೋಜಿಸಲಿದ್ದು, ಇಡೀ ಚಿತ್ರರಂಗವೇ ಕಾರ್ಯಕ್ರಮಕ್ಕೆ ಬರಲಿದೆ ಎನ್ನಲಾಗಿದೆ.

ಪುನೀತ್ ಜೊತೆ ನಟಿಸಿದ ಎಲ್ಲಾ ನಾಯಕಿಯರು, ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿಯಿದೆ. ಕ್ರಿಸ್ ಮಸ್ ವೇಳೆ ಈ ಕಾರ್ಯಕ್ರಮ ಟಿವಿಯಲ್ಲಿ ಪ್ರಸಾರವಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ