ಸಂಜಯ್ ದತ್‌‌ಗೆ ಮತ್ತೆ ಜೈಲಿಗೆ ಕಳುಹಿಸಲು ಸಿದ್ದ: ಮಹಾರಾಷ್ಟ್ರ ಸರಕಾರ

ಗುರುವಾರ, 27 ಜುಲೈ 2017 (15:01 IST)
ನಿಯಮ ಉಲ್ಲಂಘನೆಯಾಗಿದೆ ಎಂದಾದಲ್ಲಿ ಬಾಲಿವುಡ್ ನಟ ಸಂಜಯ್ ದತ್‌‌ಗೆ ಮತ್ತೆ ಜೈಲಿಗೆ ಕಳುಹಿಸಲು ಸಿದ್ದ ಎಂದು ಮಹಾರಾಷ್ಟ್ರ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ.
 
ಮಹಾರಾಷ್ಟ್ರ ಸರಕಾರ ಸಂಜಯ್ ದತ್ ಉತ್ತಮ ನಡುವಳಿಕೆ ಕುರಿತಂತೆ ವಿವರಣೆಯಿರುವ ಬಗ್ಗೆ ಹೈಕೋರ್ಟ್‌ಗೆ ಹೊಸ ಪ್ರಮಾಣ ಪತ್ರ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ.
 
ಮುಂಬೈ ಜೈಲಿನಿಂದ ನಿಗದಿತ ಅವಧಿಗೆ ಮುಂಚಿತವಾಗಿ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಬಿಡುಗಡೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
 
ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಸಂಜಯ್ ದತ್‌ಗೆ ಮುಂಬೈ ಹೈಕೋರ್ಟ್ ಐದು ವರ್ಷಗಳ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ