ಕಿರುತೆರೆಗೆ ಬಂದ ಕಾಂತಾರ ‘ಲೀಲಾ’ ಸಪ್ತಮಿ ಗೌಡ

Krishnaveni K

ಭಾನುವಾರ, 28 ಜನವರಿ 2024 (10:48 IST)
ಬೆಂಗಳೂರು: ಕಾಂತಾರ ಸಿನಿಮಾ ಮೂಲಕ ಮನೆ ಮಾತಾಗಿದ್ದ ನಟಿ ಸಪ್ತಮಿ ಗೌಡ ಈಗ ಕನ್ನಡ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
 

ಸಪ್ತಮಿ ಗೌಡ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯ ವಿಶೇಷ ಸಂಚಿಕೆಯಲ್ಲಿ ಅತಿಥಿಯಾಗಿ ಆಗಮಿಸಲಿದ್ದಾರೆ. ನಾಯಕಿ ಸುಧಾರಾಣಿ ಮಕ್ಕಳ ಕುತಂತ್ರದಿಂದಾಗಿ ಮನೆ ಬಿಟ್ಟು ಹೋಗುವ ಪರಿಸ್ಥಿತಿ ಬರುತ್ತದೆ. ಆಕೆ ಮತ್ತೆ ಮನೆಗೆ ಬರುತ್ತಾಳಾ ಎಂಬುದು ಸದ್ಯದ ಟ್ವಿಸ್ಟ್.

ಈ ಜನಪ್ರಿಯ ಧಾರವಾಹಿಯ ಮಹಾ ಸಂಚಿಕೆಯ ಕತೆಯ ಬಗ್ಗೆ ನಿರೂಪಣೆ ಮಾಡಲು ಸಪ್ತಮಿ ಗೌಡ ಬಂದಿದ್ದಾರೆ. ಆದರೆ ಅವರು ಧಾರವಾಹಿಯಲ್ಲಿ ನಟಿಸುತ್ತಿದ್ದಾರಾ ಎನ್ನುವುದು ಇನ್ನೂ ಕನ್ ಫರ್ಮ್ ಆಗಿಲ್ಲ.

ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡ ಹಿಂದಿಯಲ್ಲಿ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ಈಗ ತೆಲುಗಿನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅಭಿಷೇಕ್ ಅಂಬರೀಶ್ ಸಿನಿಮಾಗೆ ನಾಯಕಿಯಾಗಿದ್ದಾರೆ.

 ಸಿನಿಮಾದಲ್ಲಿ ಬ್ಯುಸಿಯಿರುವಾಗಲೇ ಕಿರುತೆರೆಯಲ್ಲಿ ಅತಿಥಿಯಾಗಿ ಎಂಟ್ರಿ ಕೊಡುತ್ತಿರುವುದು ವಿಶೇಷ. ಈ ರೀತಿ ಪ್ರಿಯಾಂಕ ಉಪೇಂದ್ರ, ಹರಿಪ್ರಿಯಾ ಮುಂತಾದ ನಟಿಯರು ಧಾರವಾಹಿಯ ನಿರೂಪಣೆ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಸಪ್ತಮಿ ಗೌಡ ಆ ಕೆಲಸ ಮಾಡಲಿದ್ದಾರೆ. ಇದೇ ವಾರ ವಿಶೇಷ ಸಂಚಿಕೆ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ