ಪತ್ನಿಯನ್ನು ಆ ಸ್ಥಿತಿಯಲ್ಲಿ ನೋಡಿ ಜೋರಾಗಿ ಅತ್ತಿದ್ರಂತೆ ರಾಜಮೌಳಿ

Sampriya

ಶನಿವಾರ, 3 ಆಗಸ್ಟ್ 2024 (20:03 IST)
Photo Courtesy X
ಬೆಂಗಳೂರು:  ಮಗಧೀರ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಡೆದ ಅವಘಡದಲ್ಲಿ ಪತ್ನಿ ರಮಾ ಅವರ ಸ್ಥಿತಿಯನ್ನು ನೋಡಿ ದಿಕ್ಕು ತೋಚದೆ ಜೋರಾಗಿ ಅತ್ತಿರುವುದಾಗಿ ಭಾರತದ ಖ್ಯಾತ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಹೇಳಿಕೊಂಡಿದ್ದಾರೆ.

'RRR' ನಿರ್ದೇಶಕರು ತಮ್ಮ ಸಾಕ್ಷ್ಯಚಿತ್ರ 'ಮಾಡರ್ನ್ ಮಾಸ್ಟರ್ಸ್' ನಲ್ಲಿ ಈ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ರಾಮ್‌ಚರಣ ಮತ್ತು ಕಾಜಲ್ ಅಗರ್ವಾಲ್ ಅವರೊಂದಿಗಿನ ಐಕಾನಿಕ್ ಮಗಧೀರ ಸಿನಿಮಾದ ಸಮಯದಲ್ಲಿ ರಾಜಮೌಳಿ ಮತ್ತು ರಮಾ ಅವರು ಅಪಘಾತಕ್ಕೆ ಒಳಗಾಗಿದ್ದರು.

ಈ ಘಟನೆಯನ್ನು ಮೆಲುಕು ಹಾಕಿದಾಗ ರಾಜಮೌಳಿ ಅವರು  ಕಣ್ಣೀರು ಹಾಕಿದರು. ಆ ಸಂದರ್ಭದಲ್ಲಿ ನನಗೆ ತಿಳಿದಿರುವ ಪ್ರತಿಯೊಬ್ಬ ವೈದ್ಯರಿಗೆ ಕರೆ ಮಾಡಿದ್ದೇನೆ. ಪತ್ನಿ ರಮಾ ಅಪಘಾತದ ತೀವ್ರತೆಗೆ ತೀವ್ರವಾಗಿ ರಕ್ತಸ್ರಾವವಾಗಿದ್ದರು.  ಹತ್ತಿರದ ಆಸ್ಪತ್ರೆಯು 60 ಕಿ.ಮೀ ದೂರದಲ್ಲಿದೆ. ನಾನು ಭಯಭೀತನಾಗಿ ಜೋರಾಗಿ ಆಳುತ್ತಿದ್ದೆ. ಈ ವೇಳೆ ದೇವರಲ್ಲಿ ನನಗೆ ಸಹಾಯ ಮಾಡು ಎಂದು ನಾನು ಬೇಡಿಕೊಳ್ಳಲಿಲ್ಲ. ನನ್ನ ಪ್ರಕಾರ, ಕೆಲವು ಹಂತದಲ್ಲಿ, ನಾನು ಕರ್ಮ ಯೋಗವನ್ನು ನನ್ನ ಜೀವನ ವಿಧಾನವಾಗಿ ಆರಿಸಿಕೊಂಡೆ. ನನ್ನ ಕೆಲಸವೇ ನನ್ನ ದೇವರು. ಸಿನಿಮಾ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ