ಇದಕ್ಕಿಂದ ಸಾವಿರ ಪಟ್ಟು ಹಿಂಸಾಚಾರಗಳಿವೆ: ದರ್ಶನ್ ಪ್ರಕರಣದ ಬಗ್ಗೆ ಅನಂತ್‌ನಾಗ್ ಶಾಕಿಂಗ್ ಹೇಳಿಕೆ

Sampriya

ಶನಿವಾರ, 3 ಆಗಸ್ಟ್ 2024 (19:34 IST)
Photo Courtesy X
ಬೆಂಗಳೂರು: ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರು ಮೊದಲ ಬಾರಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

ಇಂತಹ ಘಟನೆಗಳು ಎಲ್ಲ ಕಡೆ ಆಗುತ್ತಿದೆ. ಇಲ್ಲಿ ಒಬ್ಬ ಸಿನಿಮಾ ವ್ಯಕ್ತಿಯ ಜೀವನದಲ್ಲಿ ನಡೆದಿದ್ದರಿಂದ ಇದು ಹೆಚ್ಚು ಪ್ರಚಾರಕ್ಕೆ ಒಳಪಟ್ಟಿದೆ. ಇದಕ್ಕಿಂತ ಸಾವಿರ ಪಟ್ಟು ಹಿಂಸೆಗಳು ರಾಜ್ಯ ರಾಜ್ಯಗಳ ಮಧ್ಯೆ ದೇಶ ದೇಶಗಳ ಮಧ್ಯೆ ನಡೆಯುತ್ತಿದೆ.  ನಮ್ಮ ಸುತ್ತಾ ಮುತ್ತಾ ಹಲವು ಘಟನೆಗಳು ನಡೆಯುತ್ತಿರುತ್ತದೆ. ಇಂದು ಮಾಧ್ಯಮಗಳು ರಾಜ್ಯದಲ್ಲಿ ಬೇರೆ ಯಾವುದು ಸುದ್ದಿಯಿಲ್ಲದ ಹಾಗೇ  ಒಂದು ವಿಚಾರವನ್ನು ಕೇಂದ್ರಿಕರಿಸಿ ಸುದ್ದಿ ಮಾಡುತ್ತಿದೆ ಎಂದು ಮಾಧ್ಯಮಗಳ ಮೇಲೆ ಗರಂ ಆದರು.

ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದು, ಈ ಪ್ರಕರಣ ಸಂಬಂಧ ಈಗಾಗಲೇ ಸಿನಿಮಾ ಮಂದಿ ಪ್ರತಿಕ್ರಿಯಿಸಿದ್ದಾರೆ. ಅದಲ್ಲದೆ ಅನೇಕ ಮಂದಿ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ.

 ಇದೀಗ ಹಿರಿಯ ನಟ ಅನಂತ್ ನಾಗ್ ಅವರು ನಟನ ಸಂಬಂಧ ವಿಚಾರಗಳೇ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ