ರಾಜಕೀಯ ಕಿತ್ತಾಟದಲ್ಲಿ ಗಾಯಕ ವಿಜಯ್ ಪ್ರಕಾಶ್ ಗೆ ಅವಮಾನ

ಶುಕ್ರವಾರ, 10 ಜನವರಿ 2020 (08:58 IST)
ಬೆಂಗಳೂರು: ಆನೆಗುಂದಿ ಉತ್ಸವದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಗೆ ಅವಮಾನ ಮಾಡಲಾಗಿದೆ. ಸನ್ಮಾನ ಮಾಡುವ ವಿಚಾರದಲ್ಲಿ ರಾಜಕೀಯ ನಾಯಕರ ಕಿತ್ತಾಟದಲ್ಲಿ ಖ್ಯಾತ ಗಾಯಕನನ್ನು ಅವಮಾನಿಸಲಾಗಿದೆ.


ಆನೆಗುಂದಿ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಬಂದಿದ್ದ ವಿಜಯ್ ಪ್ರಕಾಶ್ ಗೆ ಸನ್ಮಾನ ಏರ್ಪಡಿಸಲು ನಿರ್ಧರಿಸಲಾಗಿತ್ತು. ಬಿಜೆಪಿ ಶಾಸಕ ಮುನಳ್ಳಿ ಪರಣ್ಣ ಸನ್ಮಾನ ಮಾಡುವುದೆಂದು ನಿಗದಿಯಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಶಾಸಕರು ಬಾರದೇ ಹೋಗಿದ್ದರಿಂದ ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

ಬಳಿಕ ವಿಜಯ್ ಪ್ರಕಾಶ್ ಹಾಡಿನ ಕಾರ್ಯಕ್ರಮ ಶುರು ಮಾಡಿದ್ದರು. ಈ ವೇಳೆ ಆಗಮಿಸಿದ ಶಾಸಕ ಮುನಳ್ಳಿಗೆ ಸನ್ಮಾನ ನಡೆದಿರುವುದು ಗೊತ್ತಾಗಿ ರಂಪಾಟ ಮಾಡಿದ್ದಾರೆ. ಒಂದೆಡೆ ವಿಜಯ್ ಪ್ರಕಾಶ್ ವೇದಿಕೆಯಲ್ಲಿ ಹಾಡುತ್ತಿದ್ದರೆ ಇನ್ನೊಂದೆಡೆ ಮುನಳ್ಳಿ ಪರಣ್ಣ ಆಯೋಜಕರ ಜತೆ ವಾಗ್ವಾದ ನಡೆಸುತ್ತಿದ್ದರು. ಈ ವಾಗ್ವಾದವನ್ನು ವೇದಿಕೆಯಿಂದಲೇ ನೋಡಿದ ವಿಜಯ್ ಪ್ರಕಾಶ್ ಶಾಸಕರ ಬಳಿ ಬಂದು ತಾವೇ ಅವರನ್ನು ಸಮಾಧಾನಿಸಿ ವೇದಿಕೆ ಕರೆದುಕೊಂಡು ಬಂದಿದ್ದಲ್ಲದೆ, ಎರಡನೇ ಬಾರಿ ಸನ್ಮಾನ ಮಾಡಿಸಿದರು!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ