ಜೈಲ್ ಮುಂದೆ ನಿಂತು 'ಡಿ ಬಾಸ್'ಗೆ ಜೈ ಎಂದ ಫ್ಯಾನ್ಸ್

Sampriya

ಶನಿವಾರ, 22 ಜೂನ್ 2024 (17:33 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಪರಪ್ಪನ ಅಗ್ರಹಾರ ಜೈಲು ಸೇರಿದ ನಟ ದರ್ಶನ್‌ರನ್ನು ನೋಡಲು ಅವರ ಅಭಿಮಾನಿಗಳು ಪೊಲೀಸ್ ವಾಹನವನ್ನ ಬೆನ್ನಟ್ಟಿ ಬಂದು ಡಿ ಬಾಸ್ ಪರ ಜೈಕಾರ ಕೂಗಿದ್ದಾರೆ.

ಅದಲ್ಲದೆ ಪರಪ್ಪನ ಅಗ್ರಹಾರದ ಬಳಿ ಬಂದ ಅವರ ನೂರಾರು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.  ಇನ್ನೂ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಪೊಲೀಸ್ ಕಸ್ಟಡಿ ಅವಧಿ ಇಂದು ಮುಗಿದಿದ್ದರಿಂದ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಇನ್ನೂ ಕೋರ್ಟ್ ಆದೇಶದಂತೆ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ವೇಳೆ ನ್ಯಾಯಾಲಯದಿಂದ ದರ್ಶನ್ ಹೊರ ಬರುವಾಗ ಡಿ ಬಾಸ್ ಡಿ ಬಾಸ್ ಎಂದು ನೂರಾರು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ