ಚಿತ್ರರಂಗದ ಸಮಸ್ಯೆ ಬಗ್ಗೆ ಸಚಿವರ ಭೇಟಿಯಾದ ಸ್ಟಾರ್ ಗಳು: ಕಿಚ್ಚ-ದಚ್ಚು ಎಲ್ಲಿ ಹೋದ್ರು?

ಗುರುವಾರ, 30 ಜುಲೈ 2020 (09:39 IST)
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಈಗ ಶಿವರಾಜ್ ಕುಮಾರ್ ರೂಪದಲ್ಲಿ ಹೊಸ ನಾಯಕ ಸಿಕ್ಕಿದ್ದಾರೆ. ಶಿವಣ್ಣ ನೇತೃತ್ವದಲ್ಲಿ ನಿನ್ನೆ ಅವರ ನಿವಾಸದಲ್ಲಿ ಸಭೆ ನಡೆಸಿ ಸಚಿವ ಸಿಟಿ ರವಿ ಬಳಿಕ ಚಿತ್ರರಂಗದ ಸಮಸ್ಯೆಯನ್ನು ವಿವರಿಸಿದ್ದಾಗಿದೆ.


ಈ ಸಭೆಗೆ ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ, ರೋರಿಂಗ್ ಸ್ಟಾರ್ ಶ್ರೀಮುರಳಿ, ರಮೇಶ್ ಅರವಿಂದ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಬಹುತೇಕ ಘಟಾನುಘಟಿಗಳು ಆಗಮಿಸಿದ್ದರು. ಆದರೆ ಚಿತ್ರರಂಗದ ಇಬ್ಬರು ಪ್ರಮುಖ ಸ್ಟಾರ್ ಗಳಾದ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಇರಲಿಲ್ಲ.

ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಎಲ್ಲರೂ ಇದ್ದಾರೆ ಸರಿ ಆದರೆ ಕಿಚ್ಚ ಮತ್ತು ದರ್ಶನ್ ಏಕಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಇಬ್ಬರೂ ಸ್ಟಾರ್ ಗಳ ನಡುವಿನ ಶೀತಲ ಸಮರ ಎಲ್ಲರಿಗೂ ಗೊತ್ತಿರುವುದೇ. ಆದರೆ ಇಂತಹ ವಿಚಾರದಲ್ಲೂ ಒಬ್ಬರು ಬರುತ್ತಾರೆಂದು ಇನ್ನೊಬ್ಬರು ಬಾರದೇ ಇರುವುದು, ಕೊನೆಗೆ ಇಬ್ಬರೂ ಗೈರಾಗುವುದು ಸರಿಯೇ ಎಂದು ಹಲವರು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ