ದರ್ಶನ್, ಯಶ್ ಸಾಥ್ ಕೊಡೋದು ಪಕ್ಕಾ: ಕಿಚ್ಚ ಸುದೀಪ್ ಬಗ್ಗೆ ಸುಮಲತಾ ಹೇಳಿದ್ದೇನು?

ಬುಧವಾರ, 13 ಮಾರ್ಚ್ 2019 (09:00 IST)
ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣಾ ಕಣದಿಂದ ಸ್ಪರ್ಧೆ ಮಾಡಲಿರುವ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾಗೆ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಸಾಥ್ ಕೊಡಲು ಮುಂದೆ ಬಂದಿದ್ದಾರೆ.


ಆದರೆ ಇತ್ತೀಚೆಗೆ ದರ್ಶನ್ ಇರುವಾಗ ನನ್ನ ಅಗತ್ಯ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿಕೆ ಕೊಟ್ಟಿದ್ದರು. ಇದು ಭಾರೀ ಚರ್ಚೆಗೂ ಕಾರಣವಾಗಿತ್ತು. ಈ ಬಗ್ಗೆ ಇದೀಗ ಸ್ವತಃ ಸುಮಲತಾ ಅಂಬರೀಶ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

‘ಯಾರಿಗೂ ನಾನು ನನ್ನ ಪರವಾಗಿ ನಿಲ್ಲಿ ಎಂದು ಒತ್ತಾಯ ಮಾಡುವುದು ಸರಿಯಲ್ಲ. ಎಲ್ಲರಿಗೂ ಅವರವರ ಕೆಲಸಗಳಿರುತ್ತವೆ. ನಮ್ಮ ಕುಟುಂಬಕ್ಕೆ ಸುದೀಪ್ ಒಳ್ಳೆಯ ಫ್ರೆಂಡ್. ಆ ಫ್ರೆಂಡ್ ಶಿಪ್ ಗೆ ರಾಜಕೀಯ ಬೆರೆಸಲು ನನಗಿಷ್ಟವಿಲ್ಲ’ ಎಂದು ಸುಮಲತಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ದರ್ಶನ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಕೂಡಾ ಸುಮಲತಾ ಮನೆಗೆ ಭೇಟಿ ನೀಡಿ ಪ್ರಚಾರದ ರೂಪು ರೇಷೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆ ಮೂಲಕ ಇಬ್ಬರೂ ಸುಮಲತಾಗೆ ಸಾಥ್ ಕೊಡುವುದು ಪಕ್ಕಾ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ