ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಈ ಬಾಲಿವುಡ್ ನಟನ ಆಗಮನ?!

ಮಂಗಳವಾರ, 12 ಮಾರ್ಚ್ 2019 (09:10 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ‘ಯುವರತ್ನ’ ಸಿನಿಮಾದಲ್ಲಿ ಬಾಲಿವುಡ್ ನಟನೊಬ್ಬನ ಪ್ರವೇಶವಾಗಲಿರುವ ಸುದ್ದಿಯೊಂದು ಓಡಾಡುತ್ತಿದೆ.


ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಬಾಲಿವುಡ್ ನಟರು ಬಂದು ನಟಿಸಿ ಹೋಗುತ್ತಿರುವುದು ಟ್ರೆಂಡ್ ಆಗುತ್ತಿದೆ. ಇದೀಗ ಪುನೀತ್ ಸಿನಿಮಾಗೆ ಬಾಲಿವುಡ್ ನಟ ಬೊಮ್ಮನ್ ಇರಾನಿ ಆಗಮನವಾಗುವ ಸಾಧ್ಯಯಿದೆ ಎನ್ನಲಾಗಿದೆ.

ಯುವರತ್ನ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಚಿತ್ರದ ಪ್ರಮುಖ ಪಾತ್ರಕ್ಕೆ ಬೊಮ್ಮನ್ ಇರಾನಿಯವರನ್ನು ಕರೆತರಲು ಪ್ರಯತ್ನ ನಡೆದಿದೆಯಂತೆ. ಈ ಸಿನಿಮಾಗೆ ನಾಯಕಿಯಾಗಿ ಸಯ್ಯೇಷಾ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ