ಇಂದು ಬೇಬಿ ಬೆಟ್ಟಕ್ಕೆ ಸುಮಲತಾ ಅಂಬರೀಶ್ ಭೇಟಿ

ಬುಧವಾರ, 7 ಜುಲೈ 2021 (09:10 IST)
ಮಂಡ್ಯ: ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆಯಿಂದಾಗಿ ಕೆಆರ್ ಎಸ್ ಜಲಾಶಯಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದ ಸಂಸದೆ ಸುಮಲತಾ ಅಂಬರೀಶ್ ಇಂದು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.


ಇಂದು ಮಧ್ಯಾಹ್ನ 12.15 ರ ವೇಳೆಗೆ ಪಾಂಡವಪುರ ತಾಲೂಕಿಗೆ ಆಗಮಿಸಲಿರುವ ಸುಮಲತಾ ಬಳಿಕ ಶ್ರೀರಂಗಪಟ್ಟಣದ ಚೆನ್ನನಕೆರೆ, ಹಂಗರಹಳ್ಳಿ, ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಅಕ್ರಮ ಗಣಿಗಾರಿಕೆ ಅಡ್ಡಾಗಳ ಪರಿಶೀಲನೆ ನಡೆಸಲಿದ್ದಾರೆ.

ಗಣಿಗಾರಿಕೆಯಿಂದಾಗಿ ಜಲಾಶಯದ ಸುರಕ್ಷತೆಗೆ ತೊಂದರೆಯಾಗುತ್ತಿದೆ ಎನ್ನುವುದು ಸುಮಲತಾ ವಾದ. ಈ ಬಗ್ಗೆ ಜೆಡಿಎಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರ ನಡುವೆ ವಾದ-ಪ್ರತಿವಾದ ಮುಂದುವರಿದ ಬೆನ್ನಲ್ಲೇ ಸುಮಲತಾ ಭೇಟಿ ಮಹತ್ವ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ