ದರ್ಶನ್ ನೋಡಲು ಸುಮಲತಾ ಅಮ್ಮ ಬರಲಿಲ್ಲ, ಹೆತ್ತಮ್ಮನೇ ಬಂದಿದ್ದು

Sampriya

ಬುಧವಾರ, 3 ಜುಲೈ 2024 (16:21 IST)
Photo Courtesy X
ಬೆಂಗಳೂರು: ದರ್ಶನ್ ನನಗೆ ಮಗ ಇದ್ದ ಹಾಗೇ ಎಂದು ಹೇಳಿಕೊಂಡಿದ್ದ ಸುಮಲತಾ ಅವರು ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗದೆ ಮೌನವಹಿಸಿರುವ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಪ್ರಶ್ನಿಸುತ್ತಿದ್ದಾರೆ.

ನನ್ನ ಅಮ್ಮ ಹೇಗೋ ಹಾಗೇ ನನಗೆ ಸುಮಲತಾ ಅವರು ಎಂದು ದರ್ಶನ್ ಆಗಾಗ ವೇದಿಕೆಯಲ್ಲಿ ಹೇಳಿಕೊಳ್ಳುತ್ತಿರುತ್ತಾರೆ. ಇನ್ನೂ 2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅವರು ಗೆಲುವು ಸಾಧಿಸುವಲ್ಲಿ ನಟ ದರ್ಶನ್ ಅವರ ಪಾತ್ರ ಬಹಳ ದೊಡ್ಡದಿದೆ. ಅಂಬರೀಶ್ ಹಾಗೂ ಸುಮಲತಾ ಅವರನ್ನು ತಂದೆ ತಾಯಿ ಹಾಗೇ ಗೌರವಿಸುತ್ತಿದ್ದ ದರ್ಶನ್ ಅವರು ಅವರ ಯಾವುದೇ ಖಾಸಗಿ ಕಾರ್ಯಕ್ರಮದಲ್ಲಿ ಸ್ವಂತ ಮಗನಂತೆ ಪಾಲ್ಗೊಳ್ಳುತ್ತಿದ್ದರು. ಇನ್ನೂ ಅಂಬರೀಶ್ ಅವರು ದರ್ಶನ್ ಜತೆಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ.

ಇದೀಗ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಚಾರಧೀನ ಕೈದಿಯಾಗಿದ್ದು, ಇಷ್ಟು ದಿನವಾದರೂ ಸುಮಲತಾ ಆಗಲಿ, ಅವರ ಮಗ ಅಭಿಷೇಕ್ ಆಗಲಿ ಅವರನ್ನು ಭೇಟಿಯಾಗಲೇ ಇಲ್ಲ ಎಂಬ ಮಾತು ಹರಿದಾಡುತ್ತಿದೆ.

ಈ ಸಂಬಂಧ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮೂವರು ಒಟ್ಟಿಗೆ ನಿಂತಿರುವ ಫೋಟೋ ಹಾಕಿ ಕೊನೆಗೂ ನಮ್‌ ದರ್ಶನ್ ಅವರನ್ನು ಭೇಟಿಯಾಗಲುಬ ಬಂದಿತ್ತು ಅವರ ಹೆತ್ತಮ್ಮ, ಸ್ವಂತ ಸಹೋದರ ಬಿಟ್ರೇ ಈ ನಕಲಿ ದತ್ತು ಅಮ್ಮ ಮಗ ಬರಲೇ ಇಲ್ಲ ಅಂತಾ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ವಿಧವಿಧವಾಗಿ ಕಮೆಂಟ್ ಮಾಡಿದ್ದಾರೆ. ಅವರು ಎಲೆಕ್ಷನ್ ಟೈಮ್‌ನಲ್ಲಿ ಬರುವವರು ಎಂದು ಒಬ್ಬರು ಬರೆದುಕೊಂಡರೆ, ಮತ್ತೊಬ್ಬರು ಈಗ ನಮ್ ಬಾಸ್‌ಗೆ ಗೊತ್ತಾಗಿರ್ಬುದು ಯಾರು ನಮ್ಮವರು ಎಂದು ಹಲವು ಮಂದಿ ಕಮೆಂಟ್ ಮಾಡುತ್ತಿದ್ದಾರೆ.

ಈಚೆಗೆ ದರ್ಶನ್ ಅವರನ್ನು ಅವರ ತಾಯಿ ಮೀನಾ, ಸಹೋದರ ದಿನಕರ್ ತೂಗುದೀಪ, ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಒಟ್ಟಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ತಾಯಿಯನ್ನು ಕಂಡು ದರ್ಶನ್ ಅವರು ಕಣ್ಣೀರು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ