ಸುಶಾಂತ್ ಆತ್ಮಹತ್ಯೆ ಪ್ರಕರಣ: ಸಲ್ಮಾನ್ ಖಾನ್, ಕರಣ್ ಜೋಹರ್ ವಿರುದ್ಧ ಪ್ರಕರಣ ದಾಖಲು

ಗುರುವಾರ, 18 ಜೂನ್ 2020 (09:23 IST)
ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಕಾರಣ ಎಂಬ ಆರೋಪದ ಬೆನ್ನಲ್ಲೇ ಘಟಾನುಘಟಿ ಸ್ಟಾರ್ ಗಳ ವಿರುದ್ಧ ಬಿಹಾರದಲ್ಲಿ ಪ್ರಕರಣವೊಂದು ದಾಖಲಾಗಿದೆ.

 
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಬಾಲಿವುಡ್ ನಲ್ಲಿ ಹೊರಗಿನಿಂದ ಬಂದವರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿ ಬಿಹಾರದ ಮುಝಾಫರ್ ಪುರ್ ನಲ್ಲಿ ಸಲ್ಮಾನ್, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ಏಕ್ತಾ ಕಪೂರ್ ಸೇರಿದಂತೆ ಎಂಟು ಘಟಾನುಘಟಿ ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಸುಧೀರ್ ಕುಮಾರ್ ಓಝಾ ಎಂಬ ವಕೀಲರು ದೂರು ಸಲ್ಲಿಸಿದ್ದಾರೆ.

ಇವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಶಾಂತ್ ರನ್ನು ಏಳು ಸಿನಿಮಾಗಳಿಂದ ಕೈ ಬಿಡಲೂ ಈ ಕಾಲೆಳೆಯುವ ಮಂದಿಯೇ ಕಾರಣ ಎಂದು ಸುಧೀರ್ ಕುಮಾರ್ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ