ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಅಕ್ಷೇಪಾರ್ಹ ಹೇಳಿಕೆ: ತೆಲುಗು ನಟನ ವಿರುದ್ಧ ಫ್ಯಾನ್ಸ್ ಗರಂ

ಗುರುವಾರ, 10 ಡಿಸೆಂಬರ್ 2020 (10:11 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ತೆಲುಗು ನಟ ವಿಜಯ ರಂಗರಾಜು ಎಂಬವರ ವಿರುದ್ಧ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮುತ್ತೈದೆ ಭಾಗ್ಯ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾಗ ಘಟನೆ ಬಗ್ಗೆ ಅತಿರೇಕದ ಹೇಳಿಕೆ ನೀಡಿದ್ದಾರೆ. ವಿಷ್ಣುವರ್ಧನ್ ಗೆ ಲೇಡೀಸ್ ವೀಕೆನೆಸ್ ಇತ್ತು. ಮುತ್ತೈದೆ ಭಾಗ್ಯ ಸಿನಿಮಾ ಶೂಟಿಂಗ್ ಗೆ ಹೋಗಿದ್ದಾಗ ನನ್ನನ್ನು ನಟಿ ಜಯಮಾಲಿನಿ ತಬ್ಬಿಕೊಂಡರು. ಇದನ್ನು ನೋಡಿ ಬೇಸರಗೊಂಡ ವಿಷ್ಣುವರ್ಧನ್ ನಮ್ಮಿಬ್ಬರನ್ನು ಸೆಟ್ ನಿಂದ ಹೊರಗೆ ಕಳುಹಿಸಿ ಎಂದಿದ್ದರು. ಯಾಕೆ ಎಂದಿದ್ದಕ್ಕೆ ಇದರಿಂದ ನನಗೆ ಡಿಸ್ಟರ್ಬ್ ಆಗುತ್ತದೆ ಎಂದಿದ್ದರು. ಯಾಕೆಂದರೆ ಅವರಿಗೆ ಲೇಡೀಸ್ ವೀಕೆನೆಸ್ ಇತ್ತು. ನಾನು ತಕ್ಷಣ ವಿಷ್ಣುವರ್ಧನ್ ಕೊರಳ ಪಟ್ಟಿ ಹಿಡಿದುಕೊಂಡೆ ಎಂದೆಲ್ಲಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಷ್ಣು ದಾದ ಏನು ಎಂದು ಇಡೀ ಕರ್ನಾಟಕ ಜನತೆಗೆ ಗೊತ್ತು. ಹೆಸರೇ ಗೊತ್ತಿಲ್ಲದ ಇಂತಹವರೆಲ್ಲಾ ದಾದ ಬಗ್ಗೆ ಸರ್ಟಿಫಿಕೇಟ್ ಕೊಡಬೇಕಾಗಿಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರೀ ಆಕ್ರೋಶ ವ್ಯಕ್ತಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ