ಮತ್ತೊಮ್ಮೆ ಶೃತಿ- ಸರ್ಜಾ ಸಂಧಾನ ಸಭೆ ನಡೆಸಲ್ಲ ಎಂದ ಫಿಲ್ಮ ಚೇಂಬರ್

ಶನಿವಾರ, 27 ಅಕ್ಟೋಬರ್ 2018 (07:38 IST)
ಬೆಂಗಳೂರು : ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ನಡುವಿನ ಮೀಟೂ ವಿವಾದದ ಸಂಧಾನ ಕಾರ್ಯಕ್ಕೆ ಇನ್ನು ಮುಂದೆ ಚಲನಚಿತ್ರ ವಾಣಿಜ್ಯ ಮಂಡಳಿ ತಲೆ ಹಾಕುವುದಿಲ್ಲ ಎಂದು ಹೇಳಿದೆ.


ಗುರುವಾರ ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಜೊತೆ ಮಾತುಕತೆ ನಡೆಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಶುಕ್ರವಾರ ಬೆಳಿಗ್ಗೆ ತಮ್ಮ ನಿರ್ಧಾರವನ್ನು ತಿಳಿಸಲು ಕಾಲಾವಕಾಶ ನೀಡಿತ್ತು. ಆದರೆ ಇವರಿಬ್ಬರು  ಕೋರ್ಟ್ ಮುಖಾಂತರ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ಬೇಸರಗೊಂಡ ಫಿಲ್ಮ ಚೇಂಬರ್ ಮತ್ತೊಮ್ಮೆ ಶೃತಿ ಹರಿಹರನ್ -ಅರ್ಜುನ್ ಸರ್ಜಾ ಅವರ ನಡುವೆ ಸಂಧಾನ ಸಭೆ ನಡೆಸುವುದಿಲ್ಲ ಅಂತ ನಿರ್ಧಾರ ಮಾಡಿದೆ ಎನ್ನಲಾಗಿದೆ. 


ಹಾಗೇ ಸಂಧಾನ ಸಭೆಯ ನೇತೃತ್ವ ವಹಿಸಿದ್ದ ಕನ್ನಡದ ಹಿರಿಯ ನಟ ಅಂಬರೀಶ್ ಅವರು ಈ ವಿಚಾರದಿಂದ ಬೇಸರಗೊಂಡು ನನ್ನನ್ನ ಇನ್ಮೇಲೆ ಸಂಧಾನಕ್ಕೆ ಕರೆಯಬೇಡಿ ನೆನ್ನೆ ಮೊನ್ನೆ ಬಂದವರು ನನ್ ಮಾತು ಕೇಳಲ್ಲ ಅಂತ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ