ನಿರ್ದೇಶಕ ಶಂಕರ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆಯೇ?

ಮಂಗಳವಾರ, 23 ಫೆಬ್ರವರಿ 2021 (11:39 IST)
ಹೈದರಾಬಾದ್ : ನಿರ್ದೇಶಕ ಶಂಕರ್ ಅವರು ‘ಜುಗಿಬಾ’ ಎಂಬ ಸಣ್ಣ ಕಥೆ ನಕಲಿ ಮಾಡಿದ್ದಾರೆ ಎಂಬ  ಪ್ರಕರಣ ಕೋರ್ಟ್ ನಲ್ಲಿ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಶಂಕರ್ ಅವರಿಗೆ ಯಾವುದೇ ಪುರಾವೆಗಳಿಲ್ಲದೇ ಜಾಮೀನು ರಹಿತ ವಾರೆಂಟ್ ನೀಡಿದ್ದಾರೆ ಎಂದು ವರದಿಯಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಶಂಕರ್ ಅವರು, ಸರಿಯಾದ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಈ ಪ್ರಕರಣದ ವಿಚಾರಣೆಯನ್ನು  ಮುಂದೂಡಲಾಗಿದೆ. ತಮ್ಮ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ ಎಂಬ ವದಂತಿ ಸುಳ್ಳು ಎಂದು ತಿಳಿಸಿದ್ದಾರೆ. ಆನ್ ಲೈನ್ ವರದಿಗಾರರ ದೋಷದಿಂದಾಗಿ ಹೀಗೆ ಹೇಳಲಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ