ಬ್ಯಾನರ್ ಕಟ್ಟಲು ಹೋಗಿ ಯಶ್ ಬರ್ತ್ ಡೇ ದಿನವೇ ಸಾವನ್ನಪ್ಪಿದ್ದ ಮೂವರು ಫ್ಯಾನ್ಸ್

Krishnaveni K

ಸೋಮವಾರ, 8 ಜನವರಿ 2024 (09:21 IST)
ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಜನ್ಮದಿನವಿದ್ದು, ಇದೇ ದಿನ ಎಲ್ಲರೂ ಸಂಭ್ರಮದಲ್ಲಿರುವಾಗಲೇ ದುಃಖದ ಸಮಾಚಾರವೊಂದು ಕೇಳಿಬಂದಿದೆ.

ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುವಾಗ ಮೂವರು ಅಭಿಮಾನಿಗಳು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಗದಗ ಜಿಲ್ಲೆಯಲ್ಲಿ ಈ ಧಾರುಣ ಘಟನೆ ನಡೆದಿದೆ. ಘಟನೆಯಲ್ಲಿ 21 ವರ್ಷದ ಹನುಮಂತ ಹರಿಜನ, 20 ವರ್ಷದ ಮುರಳಿ ನಡವಿಮನಿ, 19 ವರ್ಷದ ನವೀನ್ ಮೃತಪಟ್ಟವರು.

ಯಶ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ನೆರವೇರಿಸಲು ಈ ಯುವಕರು ತಯಾರಿ ನಡೆಸಿದ್ದರು. ಅದರಂತೆ ಯಶ್ ಗೆ ಶುಭ ಕೋರುವ ಬ್ಯಾನರ್ ನ್ನು ನೀಲಗಿರಿ ತೋಪಿನಲ್ಲಿ ಕಟ್ಟುವಾಗ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ.

ಇದೀಗ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಕೂಗಾಟ, ಚೀರಾಟ ಕೇಳಿ ಸ್ಥಳೀಯರು ಸ್ಥಳಕ್ಕಾಗಮಿಸಿದರೂ ಏನೂ ಮಾಡಲಾಗದೇ ಅಸಹಾಯಕರಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ