ಕನ್ನಡತಿ ಕಿರಣ್ ರಾಜ್ ಗೆ ಕೊರೋನಾ: ಗುಣವಾಗು ಗೆಳೆಯ ಎಂದು ಹಾರೈಸಿದ ಭುವಿ

ಶನಿವಾರ, 22 ಜನವರಿ 2022 (09:10 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಕನ್ನಡತಿ ಧಾರವಾಹಿ ಮೂಲಕ ಮನೆ ಮಾತಾಗಿರುವ ನಾಯಕ ನಟ ಕಿರಣ್ ರಾಜ್ ಗೆ ಕೊರೋನಾ ಸೋಂಕು ತಗುಲಿದೆ.

ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿ ಸಂದೇಶ ರವಾನಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಕಿರಣ್ ರಾಜ್, ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ, ಹಾರೈಸಿದ ನಿಮಗೆಲ್ಲಾ ಧನ್ಯವಾದಗಳು ಎಂದಿದ್ದಾರೆ.

ಇನ್ನು, ಕಿರಣ್ ರಾಜ್ ಅಲಿಯಾಸ್ ಕನ್ನಡತಿಯ ಹರ್ಷನಿಗೆ ನಾಯಕಿ ನಟಿ ಭುವಿ ಪಾತ್ರಧಾರಿಯಾಗಿರುವ ರಂಜಿನಿ ರಾಘವನ್ ಶೀಘ್ರ ಚೇತರಿಸು ಗೆಳೆಯ ಎಂದು ವಿಶ್ ಮಾಡಿದ್ದಾರೆ. ಕೊರೋನಾ ಎರಡನೇ ಅಲೆ ಸಂದರ್ಭ ಕಿರಣ್ ರಾಜ್ ತಮ್ಮ ಫೌಂಡೇಶನ್ ಮೂಲಕ ಸಂತ್ರಸ್ತರಿಗೆ ನೆರವಾಗುವ ಮೂಲಕ ಗಮನ ಸೆಳೆದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ