ಇಬ್ಬರು ಅತಿಥಿಗಳಿಗೆ ವೇದಿಕೆಯಾಗಲಿದೆ ವೀಕೆಂಡ್ ವಿತ್ ರಮೇಶ್

ಗುರುವಾರ, 6 ಏಪ್ರಿಲ್ 2023 (09:00 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈ ವಾರ ಇಬ್ಬರು ಅತಿಥಿಗಳಿಗೆ ವೇದಿಕೆಯಾಗಲಿದೆ.

ಕಳೆದ ಎರಡು ವಾರದಿಂದ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ರಮ್ಯಾ ಮೊದಲ ಅತಿಥಿಯಾಗಿದ್ದರೆ ಪ್ರಭುದೇವ ಎರಡನೇ ವಾರ ಅತಿಥಿಯಾಗಿದ್ದರು.

ಇದೀಗ ಮೂರನೇ ವಾರ ಹೃದಯ ತಜ್ಞ ಡಾ.ಸಿ.ಎನ್. ಮಂಜುನಾಥ್ ಮತ್ತು ಹಿರಿಯ ನಟ ದತ್ತಣ್ಣ ಸಾಧಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಡಾ.ಮಂಜುನಾಥ್ ಎಪಿಸೋಡ್ ಶನಿವಾರ ಪ್ರಸಾರವಾದರೆ 80 ರ ಇಳಿವಯಸ್ಸಿನಲ್ಲೂ ಬಣ್ಣದ ಬದುಕಿನ ನಂಟು ಬಿಡದ ಸಾಧಕ ದತ್ತಣ್ಣ ಎಪಿಸೋಡ್ ಭಾನುವಾರ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ