ನನ್ನ ನಿರ್ಧಾರಕ್ಕೆ ಇಬ್ಬರು ಬದ್ದರಾಗಬೇಕು- ರವಿಚಂದ್ರನ್

ಬುಧವಾರ, 19 ಜುಲೈ 2023 (17:00 IST)
ಫೀಲಂ ಛೇಬರ್ ನಲ್ಲಿ ನಟ ರವಿಚಂದ್ರನ್ ಮತ್ತು ನಿರ್ಮಾಪಕ ಕುಮಾರ್  ಮಾತನಾಡಿದ್ರು.ಈ ವೇಳೆ ಮಾತನಾಡಿದ ರವಿಚಂದ್ರನ್ ಎಲ್ಲವನ್ನೂ ಕುಮಾರ್ ಹೇಳಿದ್ದಾರೆ.ಪರಿಸ್ಥಿತಿ ತಣ್ಣಗಾಗಬೇಕು.ಸುದೀಪ್ ಹತ್ತಿರ ನಾನು ಮಾತಾಡ್ಬೇಕು.ಎರಡು ಕಥೆಗಳನ್ನ ಕೇಳ್ತಿನಿ.ನನ್ನ ನಿರ್ಧಾರಕ್ಕೆ ಇಬ್ಬರು ಬದ್ದರಾಗಬೇಕು.20 ವರ್ಷದ ಕಥೆಯಂತೆ ಕಾಣ್ತಿದೆ.ಸುದೀಪ್ ಆದಷ್ಟು ಬೇಗ ಸಿಕ್ತಾರೆ.ನೀವು ಸ್ವಲ್ಪ ಸಮಾಧಾನ ಆಗಿರಿ.ಇಲ್ಲಿ ಕೊಂಕು ನಡೆಸೋ ಕೆಲಸ ಆಗ್ಬೇಕು.ಈಗಾಗಲೇ ಇಬ್ರು ನೊಂದಿದ್ದಾರೆ.ಚಿತ್ರರಂಗದಲ್ಲಿ ನಾವು ಸರಿಯಾಗಬೇಕು.ಒಕ್ಕೂಟದಲ್ಲಿ ಒಗ್ಗಟ್ಟಿರಬೇಕು ಎಂದು ರವಿಚಂದ್ರನ್ ಹೇಳಿದ್ದಾರೆ.
 
ಬಗೆಹರಿಸೋಕೆ ನಾನು ಟ್ರೈ ಮಾಡ್ತೀನಿ.ಪರಿಹಾರ ನಾನು ಹುಡುಕೋ ಪ್ರಯತ್ನ ಮಾಡ್ತೀನಿ.ಒಬ್ಬರ ಮೇಲೆ ಇನ್ನೊಬ್ಬರು ಟೀಕೆ ಮಾಡೋದು ಬಿಡಬೋದು.ಎಲ್ರು ಚೆನ್ನಾಗಿರಬೇಕು ಅಂತ ನನ್ನಾಸೆ.ಸುದೀಪ್ ನನಗೆ ಮಾಣಿಕ್ಯ ಚಿತ್ರದಿಂದ ತುಂಬಾ ಕ್ಲೋಸ್ ಆದ್ರು.ಕುಮಾರ್ ಮುಂಚೆಯಿಂದ ಗೊತ್ತು.ದಾಖಲೆಗಳನ್ನ ನಾನು ನೋಡ್ತೀನಿ ಮೊದಲು ಆಮೇಲೆ ಸುದೀಪ್ ಹತ್ತಿರ ಮಾತಾಡ್ತೀನಿ ಎಂದು ನಟ ರವಿಚಂದ್ರನ್ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ