ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮಿ ಕೈಯಲ್ಲಿದ್ದ ಪತ್ರಗಳ ಕಡೆಗೇ ಎಲ್ಲರ ಕುತೂಹಲ

Sampriya

ಗುರುವಾರ, 5 ಸೆಪ್ಟಂಬರ್ 2024 (16:50 IST)
ಬಳ್ಳಾರಿ: ಆರೋಪಿಗಳ ವಿರುದ್ಧದ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬೆನ್ನಲ್ಲೇ ದರ್ಶನ್‌ರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿದ್ದಾರೆ.

ಸಹೋದರ ದಿನಕರ್ ತೂಗುದೀಪ್ ಜತೆ ವಿಜಯಲಕ್ಷ್ಮೀ ಅವರು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಇನ್ನೂ ವಿಜಯಲಕ್ಷ್ಮೀ ಅವರು ಕೆಲ ಪತ್ರಗಳನ್ನು ತಂದಿದ್ದು, ಇದು ಜಾಮೀನು ಸಂಬಂಧಿಸಿದಾಗಿದೆ ಎನ್ನಲಾಗಿದೆ. ಇನ್ನೂ ಸಹೋದರ ಮತ್ತು ಪತ್ನಿ ಜೈಲಿಗೆ ಬರುತ್ತಿದ್ದ ಹಾಗೇ ದರ್ಶನ್‌ರನ್ನು ಸಂದರ್ಶಕರ ಕೊಠಡಿಗೆ ಪೊಲೀಸರು ಕರೆತಂದಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧದ 3991 ಪುಟಗಳ ಜಾರ್ಜ್‌ಶೀಟ್‌ ಅನ್ನು ಎಸಿಪಿ ಚಂದನ್ ಕುಮಾರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇನ್ನೂ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತಿದ್ದ ಹಾಗೇ ದರ್ಶನ್ ಅವರು ದೂರವಾಣಿ ಮೂಲಕ ಪತ್ನಿ ವಿಜಯಲಕ್ಷ್ಮೀ ಜತೆ ಮಾತುಕತೆ ನಡೆಸಿದ್ದಾರೆ.

ಅದರ ಬೆನ್ನಲ್ಲೇ ಪತಿಯನ್ನು ನೋಡಲು ಪತ್ನಿ ವಿಜಯಲಕ್ಷ್ಮೀ ಅವರು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಚಾರ್ಜ್‌ಶೀಟ್ ಬಗ್ಗೆ ದರ್ಶನ್‌ಗೆ ಮಾಹಿತಿ ನೀಡಿದ್ದಾರೆ. ಅದಲ್ಲದೆ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ